ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈತರಿಗೆ ಶೇ.6ರ ಬಡ್ಡಿದರ ನಿಗದಿಗೆ ರಾಜ್ಯದ ಒತ್ತಾಯ

By Staff
|
Google Oneindia Kannada News

ರೈತರಿಗೆ ಶೇ.6ರ ಬಡ್ಡಿದರ ನಿಗದಿಗೆ ರಾಜ್ಯದ ಒತ್ತಾಯ
ದೇಶದ ಬೆನ್ನೆಲುಬಿನ ಸಂಕಟಕ್ಕೆ ವಿಧಾನಸಭೆಯಲ್ಲಿ ಪ್ರತಿಸ್ಪಂದನ

ಬೆಂಗಳೂರು : ರಾಷ್ಟ್ರೀಕೃತ, ಷೆಡ್ಯೂಲು ಅಥವಾ ಗ್ರಾಮೀಣ ಬ್ಯಾಂಕುಗಳಿಂದ ರೈತರು ಪಡೆಯುವ ಕೃಷಿ ಸಾಲಕ್ಕೆ ಶೇ.6ರಂತೆ ಬಡ್ಡಿ ನಿಗದಿಪಡಿಸಬೇಕು ಎಂಬ ಸರ್ವಾನುಮತದ ನಿರ್ಣಯವನ್ನು ವಿಧಾನಸಭೆ ಅಂಗೀಕರಿಸಿದೆ.

ಸಹಕಾರಿ ಸಂಸ್ಥೆಗಳ ಮೂಲಕ ರೈತರು ಪಡೆಯುವ ಕೃಷಿ ಸಾಲಕ್ಕೆ ರಾಜ್ಯ ಸರ್ಕಾರ ಈಗಾಗಲೇ ಶೇ.6ರ ಬಡ್ಡಿ ದರವನ್ನು ನಿಗದಿಪಡಿಸಿದೆ. ಇತರೆ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲೂ ರೈತರ ಸಾಲಕ್ಕೆ ಶೇ.6ರ ಬಡ್ಡಿದರವನ್ನು ನಿಗದಿಪಡಿಸಬೇಕೆಂದು ವಿಧಾನಸಭೆ, ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.

ಸತತ ನಾಲ್ಕು ವರ್ಷಗಳ ಬರ ಪರಿಸ್ಥಿತಿಯ ಹಿನ್ನೆಲೆ, ರಾಜ್ಯ ಸರ್ಕಾರ 2004 ಮಾರ್ಚ್‌ 31ರ ವರೆಗೆ ಸಹಕಾರಿ ಸಂಸ್ಥೆಗಳಿಂದ ರೈತರು ಪಡೆದ ಸಾಲದ ಮೇಲಿನ ಬಡ್ಡಿ, ಸುಸ್ತಿ ಬಡ್ಡಿ ಮನ್ನಾ ಮಾಡಿದೆ. ಆದರೆ ಇತರೆ ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಸಾಲಪಡೆದಿರುವ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎನ್ನುವ ಪ್ರತಿಪಕ್ಷಗಳ ಕೂಗಿಗೆ ವಿಧಾನಸಭೆಯಲ್ಲಿ ಬಲ ಸಿಕ್ಕಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X