ದಾಸ-ಸಂತ ಸಾಹಿತ್ಯದ ಬಗೆಗೆ ರಾಷ್ಟ್ರೀಯ ಸಮ್ಮೇಳನ
ದಾಸ-ಸಂತ
ಸಾಹಿತ್ಯದ
ಬಗೆಗೆ
ರಾಷ್ಟ್ರೀಯ
ಸಮ್ಮೇಳನ
ಪಂಢರಾಪುರದಲ್ಲಿ
ಮೂರು
ದಿನಗಳ
ಕಾಲ
ದಾಸ
ಸಂಭ್ರಮ
ಹಂಪಿ ಕನ್ನಡ ವಿಶ್ವವಿದ್ಯಾಲಯ, ಮಂತ್ರಾಲಯ ಶ್ರೀ ರಾಘವೇಂದ್ರಸ್ವಾಮಿ ಮಠ ಮತ್ತು ಮಣಿಪಾಲ್ ಅಕಾಡೆಮಿ ಆಫ್ ಜನರಲ್ ಎಜುಕೇಷನ್ಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿರುವ ಸಮ್ಮೇಳನ ಜುಲೈ 7ರಿಂದ 9ರವರೆಗೆ ನಡೆಯಲಿದೆ.
ಪಂಢರಾಪುರದ ಉಡುಪಿ ಪಲಿಮಾರು ಮಠದಲ್ಲಿ ನಡೆಯಲಿರುವ ಸಮ್ಮೇಳನಕ್ಕೆ ಮಾಜಿ ಮುಖ್ಯಮಂತ್ರಿವೀರಪ್ಪ ಮೊಯಿಲಿ ಗುರುವಾರ ಚಾಲನೆ ನೀಡುವರು. ಹಿರಿಯ ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸುವರು.
ಡಾ.ಹಿ.ಚಿ.ಬೋರಲಿಂಗಯ್ಯ, ಡಾ.ಎಂ.ಎಸ್.ಆಳ್ವಾ, ಮುದ್ದು ಮೋಹನ್ಮತ್ತು ಡಾ.ಬಿ.ಎ.ವಿವೇಕ್ ರೈ ಮತ್ತಿತರರು ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವರು. ಈ ಸಂದರ್ಭದಲ್ಲಿ ‘ಹರಿದಾಸ ಪಾಂಡುರಂಗ ವಿಠ್ಠಲ’ ಮತ್ತು ‘ಪಾಂಡುರಂಗ ವಿಠ್ಠಲ’ ಎಂಬ ಕೃತಿಗಳು ಬಿಡುಗಡೆಗೊಳ್ಳಲಿವೆ.
ಜು.8ರಂದು ದಕ್ಷಿಣ ಭಾರತೀಯ ಭಾಷೆಗಳಲ್ಲಿ ಭಕ್ತಿ ಸಾಹಿತ್ಯದ ವಿಕಾಸ, ಮಧ್ಯಕಾಲೀನ ಭಾರತೀಯ ಭಕ್ತಿ ಪಂಥಗಳು ಕುರಿತು, ಜು.9ರಂದು ಕನ್ನಡ ಮರಾಠಿ ಭಕ್ತ ಕವಿಗಳು ಮುಂತಾದ ವಿಷಯಗಳ ಕುರಿತು ಗೋಷ್ಠಿಗಳು ನಡೆಯಲಿವೆ. ಶನಿವಾರ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಸಚಿವ ಪಿ.ಜಿ.ಆರ್.ಸಿಂಧ್ಯ, ಡಾ.ಚಿಂತಾಮಣಿ ರಾಮಚಂದ್ರ ಢೇರೆ, ರಾಜಾ ಎಸ್. ರಾಜಗೋಪಾಲಾಚಾರ್ಯ ಮೊದಲಾದವರು ಭಾಗವಹಿಸಲಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು