ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡದ ಕಂದ ಗಣೇಶ್‌ ಗೌರಿಶಂಕರವೇರಿದ್ದು ಸುಳ್ಳೇ?

By Staff
|
Google Oneindia Kannada News

ಕನ್ನಡದ ಕಂದ ಗಣೇಶ್‌ ಗೌರಿಶಂಕರವೇರಿದ್ದು ಸುಳ್ಳೇ?
ನನ್ನ ಬಳಿ ಅಗತ್ಯ ಸಾಕ್ಷ್ಯಗಳಿದ್ದು, ಅವುಗಳನ್ನು ಅಲ್ಪುಕರ್ಕ್‌ ಮುಂದಿಡುವೆ -ಗಣೇಶ್‌

ಬೆಂಗಳೂರು : ಜಗತ್ತಿನ ಅತಿ ಎತ್ತರದ ಮೌಂಟ್‌ ಎವರೆಸ್ಟ್‌ ಪರ್ವತದ ನೆಟ್ಟಿಯನ್ನು ಮೆಟ್ಟಿದ, ರಾಜ್ಯದ ಪೋಲಿಸ್‌ ಅಧಿಕಾರಿ ಪಿ.ಎನ್‌. ಗಣೇಶ್‌ ಅವರ ಸಾಧನೆ ಬಗೆಗೆ ಅನುಮಾನಗಳು ಮೂಡಿವೆ.

ಮಡಿಕೇರಿಯಲ್ಲಿ ಸಬ್‌ ಇನ್ಸ್‌ಪೆಕ್ಟರ್‌ ಆಗಿ ಸೇವೆ ಸಲ್ಲಿಸುತ್ತಿರುವ ಪಿ.ಎನ್‌.ಗಣೇಶ್‌, ಆರು ಮಂದಿ ಚಾರಣಿಗರ ತಂಡದೊಂದಿಗೆ ಜೂ.3ರಂದು ಮೌಂಟ್‌ ಎವರೆಸ್ಟ್‌ ಏರಿ ಸುದ್ದಿಯ ಕೇಂದ್ರ ಬಿಂದುವಾಗಿದ್ದರು.

ಪರ್ವತ ಏರಿದ ಬಗೆಗೆ ಅಗತ್ಯ ಸಾಕ್ಷ್ಯಗಳು ನನ್ನ ಬಳಿ ಇದ್ದು, ಸದ್ಯದಲ್ಲಿಯೇ ಅದನ್ನು ರಾಜ್ಯಪೊಲೀಸ್‌ ಮಹಾ ನಿರ್ದೇಶಕ ಅಲ್ಪುಕರ್ಕ್‌ ಅವರಿಗೆ ತಲುಪಿಸುವುದಾಗಿ ಗಣೇಶ್‌ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಅಗ್ನಿ ಪರೀಕ್ಷೆ : ಗಣೇಶ್‌ ಅವರ ಬಳಿಯಿರುವ ಛಾಯಾಚಿತ್ರಗಳಲ್ಲಿ ಟ್ರೆೃಪಾಡ್‌(ಚೀನಾ ಸರ್ಕಾರ ಶಿಖರಾಗ್ರದಲ್ಲಿ ಸ್ಥಾಪಿಸಿರುವ ಸ್ಮಾರಕ) ಕಾಣುತ್ತಿಲ್ಲ ಎಂಬುದೇ ವಿವಾದದ ಮೂಲ.

ಸಾಧನೆ ಸಮರ್ಥಿಸಲು ಶಿಖರಾಗ್ರದ ಮೇಲೆ ತೆಗೆಸಿಕೊಂಡ ಛಾಯಾಚಿತ್ರ(ಆ ಚಿತ್ರದ ಹಿನ್ನೆಲೆಯಲ್ಲಿ ಚೀನಾ ಸರ್ಕಾರ ಶಿಖರಾಗ್ರದಲ್ಲಿ ಸ್ಥಾಪಿಸಿರುವ ಟ್ರೆೃಪಾಡ್‌ ಸ್ಮಾರಕ ಕಂಡುಬರಬೇಕು), ಶಿಖರಾಗ್ರದಲ್ಲಿ ಸಂಗ್ರಹಿಸಿದ ಕಲ್ಲು ಸೇರಿದಂತೆ ವಿವಿಧ ಸಾಕ್ಷ್ಯಗಳನ್ನು ಗಣೇಶ್‌ ಒದಗಿಸಬೇಕಾಗಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X