ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತುಮಕೂರು ಜಿಲ್ಲೆಯಲ್ಲಿ ಡೆಂಗ್ಯೂ ಜ್ವರದ ಅಬ್ಬರ

By Staff
|
Google Oneindia Kannada News

ತುಮಕೂರು ಜಿಲ್ಲೆಯಲ್ಲಿ ಡೆಂಗ್ಯೂ ಜ್ವರದ ಅಬ್ಬರ
ಮಧುಗಿರಿ ತಾಲೂಕಿನ 500ಮಂದಿಯಲ್ಲಿ ಡೆಂಗ್ಯೂ ಲಕ್ಷಣ, ನಾಲ್ಕು ಬಲಿ.

ತುಮಕೂರು : ಜಿಲ್ಲೆಯ ಮಧುಗಿರಿ ತಾಲೂಕಿನ ರಂಗಮ್ಮ ಎಂಬ ಮಹಿಲೆ ಡೆಂಗ್ಯೂ ಜ್ವರಕ್ಕೆ ಬಲಿಯಾಗಿದ್ದು, ಈ ಮೂಲಕ ಡೆಂಗ್ಯೂ ಜ್ವರಕ್ಕೆ ಬಲಿಯಾದವರ ಸಂಖ್ಯೆ ಈ ಭಾಗದಲ್ಲಿ ನಾಲ್ಕಕ್ಕೆ ಏರಿದೆ.

ಮಧುಗಿರಿ ತಾಲೂಕಿನ ಸೋಗೇನಹಳ್ಳಿ ಮತ್ತು ಗಿರಿಗೊಂಡನಹಳ್ಳಿಯಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚುಹೆಚ್ಚು ಕಂಡುಬರುತ್ತಿವೆ. ಈವರೆಗೆ ಸುಮಾರು 500ಮಂದಿಯಲ್ಲಿ ಡೆಂಗ್ಯೂ ಲಕ್ಷಣಗಳು ಕಂಡು ಬಂದಿವೆ.

ಮಾಜಿ ಸಚಿವ ಡಾ.ಜಿ.ಪರಮೇಶ್ವರ್‌ ಮಧುಗಿರಿಗೆ ಭೇಟಿ ನೀಡಿ, ಪರಿಸ್ಥಿತಿಯನ್ನು ನಿಯಂತ್ರಿಸುವ ಬಗೆಗೆ ಅಧಿಕಾರಿಗಳೊಂದಿಗೆ ಚರ್ಚಿಸಿದರು. ರಂಗಮ್ಮ ಸೇರಿದಂತೆ ಈ ಹಿಂದೆ ಡೆಂಗ್ಯೂಗೆ ಬಲಿಯಾಗಿದ್ದ ಹರೀಶ್‌, ರುಕಿಯಾ ಬೇಗಂ ಮತ್ತು ಉನ್ಸದ್‌ನ್ನಿಸಾ ಅವರ ಕುಟುಂಬಗಳನ್ನು ಭೇಟಿ ಮಾಡಿದ ಮಾಜಿ ಸಚಿವರು, ತಲಾ 5000ರೂ. ಪರಿಹಾರವನ್ನು ನೀಡಿದರು.

ಡೆಂಗ್ಯೂ ಪರಿಣಾಮವೇ ಈ ಸಾವುಗಳು ಸಂಭವಿಸಿವೆ ಎಂದು ಪ್ರಯೋಗಾಲಯದ ವರದಿಗಳು ಸ್ಪಷ್ಟಪಡಿಸಿವೆ.
(ಇನ್ಫೋ ವಾರ್ತೆ)

ಮುಖಪುಟ / ವಾಟ್ಸ್‌ ಹಾಟ್‌

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X