ತೈಲ ದರ ಹೆಚ್ಚಳ ವಿರೋಧಿಸಿ ರಾಜ್ಯದಲ್ಲಿ ಪ್ರತಿಭಟನೆ
ತೈಲ
ದರ
ಹೆಚ್ಚಳ
ವಿರೋಧಿಸಿ
ರಾಜ್ಯದಲ್ಲಿ
ಪ್ರತಿಭಟನೆ
ಯುಪಿಎ
ಸರ್ಕಾರದ
ವಿರುದ್ಧ
ಎಡಪಕ್ಷಗಳು
ಕರೆ
ನೀಡಿದ್ದ
ರಾಷ್ಟ್ರ
ಬಂದ್ಗೆ
ಮಿಶ್ರ
ಪ್ರತಿಕ್ರಿಯೆ
ರಾಜಧಾನಿ ನಗರದಲ್ಲಿ ನಡೆದ ರ್ಯಾಲಿಯಲ್ಲಿ, ಎತ್ತಿನ ಗಾಡಿಯ ಮೇಲೆ ಆಟೋ ರಿಕ್ಷಾ ಮತ್ತು ದ್ವಿಚಕ್ರವಾಹನಗಳನ್ನು ಹೇರಿಕೊಂಡು ಹೊರಟ ಮೆರವಣಿಗೆ ಸಾಂಕೇತಿಕವಾಗಿ ಇಂಧನ ದರ ಹೆಚ್ಚಳದ ಪರಿಸ್ಥಿತಿಯನ್ನು ಬಿಂಬಿಸಿತ್ತು.
ಪ್ರತಿಭಟನಾಕಾರರು ಆಟೋ ರಿಕ್ಷಾ ಮತ್ತು ದ್ವಿಚಕ್ರ ವಾಹನಗಳನ್ನು ತಳ್ಳಿಕೊಂಡು ಸಾಗಿ, ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯ ವಿರುದ್ಧ ಈ ಸಂದರ್ಭದಲ್ಲಿ ಘೋಷಣೆಗಳನ್ನು ಕೂಗಲಾಯಿತು.
ಎಡ ಪಕ್ಷಗಳ ಅಸ್ತಿತ್ವ ಅಷ್ಟಾಗಿ ರಾಜ್ಯದಲ್ಲಿ ಇಲ್ಲದಿರುವುದರಿಂದ, ಸಿಪಿಐ ಮತ್ತು ಸಿಪಿಎಂ ಪಕ್ಷದ ಕಾರ್ಯಕರ್ತರೇ ಹೆಚ್ಚಾಗಿ ಪ್ರತಿಭಟನೆಯಲ್ಲಿ ಕಂಡು ಬಂದರು. ಮೈಸೂರು, ತುಮಕೂರು, ಕೋಲಾರ, ಉಡುಪಿ, ಕುಂದಾಪುರ ಮತ್ತು ರಾಜ್ಯದ ಅನೇಕ ಕಡೆಗಳಲ್ಲಿ ಪ್ರತಿಭಟನೆ ನಡೆಸಿರುವುದಾಗಿ ಸಿಪಿಎಂ ವಕ್ತಾರರು ಸುದ್ದಿಗಾರರಿಗೆ ತಿಳಿಸಿದ್ದಾರೆ.
(ಪಿಟಿಐ)
ಮುಖಪುಟ / ವಾರ್ತೆಗಳು