ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕಾವೇರಿ : ತಮಿಳುನಾಡು ಬೇಡಿಕೆಗೆ ರಾಜ್ಯದ ತಿರಸ್ಕಾರ
ಕಾವೇರಿ
:
ತಮಿಳುನಾಡು
ಬೇಡಿಕೆಗೆ
ರಾಜ್ಯದ
ತಿರಸ್ಕಾರ
ಮುಂಗಾರು
ಶುರುವಾಗುತ್ತಲೇ
ತಮಿಳುನಾಡಿನ
ಕಿರಿಕಿರಿಯೂ
ಶುರು...
ಗುರುವಾರ ನಡೆದ ಉಸ್ತುವಾರಿ ಸಮಿತಿ ಸಭೆಯಲ್ಲಿ ತಮಿಳುನಾಡು, ಕಾವೇರಿ ನದಿ ಪ್ರಾಧಿಕಾರದ ಸಭೆಯನ್ನೂ ಕರೆಯಬೇಕೆಂದು ಒತ್ತಾಯಿಸಿತು. ಕಳೆದ ವರ್ಷ ಬಾಕಿ ಉಳಿಸಿಕೊಂಡಿರುವ 41 ಟಿ ಎಂ ಸಿ ನೀರನ್ನು ಬಿಡುಗಡೆ ಮಾಡಬೇಕು. ನ್ಯಾಯಾಧಿಕರಣದ ಆದೇಶದಂತೆ ವಾರ, ತಿಂಗಳು ಲೆಕ್ಕದಲ್ಲಿ ನೀರು ಬಿಡಬೇಕೆಂಬ ಬೇಡಿಕೆಯನ್ನು ಅದು ಸಭೆಯ ಮುಂದೆ ಇಟ್ಟಿತು.
ಇದಕ್ಕೆ ಪ್ರತಿಯಾಗಿ ಉತ್ತರಿಸಿದ ಕರ್ನಾಟಕ, ಕಳೆದ ವರ್ಷ ತಮಿಳುನಾಡಿಗೆ ನಿಗದಿತ ಪ್ರಮಾಣಕ್ಕಿಂತ 6 ಟಿ ಎಂ ಸಿ ಹೆಚ್ಚಿಗೆ ನೀರು ಬಿಡಲಾಗಿದೆ. ಪ್ರಾಧಿಕಾರದ ಸಭೆ ಕರೆಯುವಷ್ಟು ತೀವ್ರ ಸಮಸ್ಯೆಯೇನೂ ತಲೆದೋರಿಲ್ಲ. ಮುಂಗಾರು ಈಗ ತಾನೇ ಆರಂಭವಾಗುತ್ತಿರುವುದರಿಂದ ದಿನಕ್ಕಿಷ್ಟು, ವಾರಕ್ಕಿಷ್ಟು ಎಂದು ಕರಾರುವಾಕ್ಕಾಗಿ ನೀರು ಬಿಡಲು ಸಾಧ್ಯವಿಲ್ಲ ಎಂದು ಸಮರ್ಥಿಸಿಕೊಂಡಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
Comments
Story first published: Friday, June 24, 2005, 23:53 [IST]