ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾವೇರಿ : ತಮಿಳುನಾಡು ಬೇಡಿಕೆಗೆ ರಾಜ್ಯದ ತಿರಸ್ಕಾರ

By Staff
|
Google Oneindia Kannada News

ಕಾವೇರಿ : ತಮಿಳುನಾಡು ಬೇಡಿಕೆಗೆ ರಾಜ್ಯದ ತಿರಸ್ಕಾರ
ಮುಂಗಾರು ಶುರುವಾಗುತ್ತಲೇ ತಮಿಳುನಾಡಿನ ಕಿರಿಕಿರಿಯೂ ಶುರು...

ನವದೆಹಲಿ : ಕಾವೇರಿ ನೀರು ಹಂಚಿಕೆಗೆ ಈ ವರ್ಷವೂ ಸಂಕಷ್ಟ ಸೂತ್ರ ಸಿದ್ಧಪಡಿಸಬೇಕು ಎನ್ನುವ ತಮಿಳುನಾಡಿನ ಬೇಡಿಕೆಯನ್ನು ಕರ್ನಾಟಕ ತಿರಸ್ಕರಿಸಿದೆ.

ಗುರುವಾರ ನಡೆದ ಉಸ್ತುವಾರಿ ಸಮಿತಿ ಸಭೆಯಲ್ಲಿ ತಮಿಳುನಾಡು, ಕಾವೇರಿ ನದಿ ಪ್ರಾಧಿಕಾರದ ಸಭೆಯನ್ನೂ ಕರೆಯಬೇಕೆಂದು ಒತ್ತಾಯಿಸಿತು. ಕಳೆದ ವರ್ಷ ಬಾಕಿ ಉಳಿಸಿಕೊಂಡಿರುವ 41 ಟಿ ಎಂ ಸಿ ನೀರನ್ನು ಬಿಡುಗಡೆ ಮಾಡಬೇಕು. ನ್ಯಾಯಾಧಿಕರಣದ ಆದೇಶದಂತೆ ವಾರ, ತಿಂಗಳು ಲೆಕ್ಕದಲ್ಲಿ ನೀರು ಬಿಡಬೇಕೆಂಬ ಬೇಡಿಕೆಯನ್ನು ಅದು ಸಭೆಯ ಮುಂದೆ ಇಟ್ಟಿತು.

ಇದಕ್ಕೆ ಪ್ರತಿಯಾಗಿ ಉತ್ತರಿಸಿದ ಕರ್ನಾಟಕ, ಕಳೆದ ವರ್ಷ ತಮಿಳುನಾಡಿಗೆ ನಿಗದಿತ ಪ್ರಮಾಣಕ್ಕಿಂತ 6 ಟಿ ಎಂ ಸಿ ಹೆಚ್ಚಿಗೆ ನೀರು ಬಿಡಲಾಗಿದೆ. ಪ್ರಾಧಿಕಾರದ ಸಭೆ ಕರೆಯುವಷ್ಟು ತೀವ್ರ ಸಮಸ್ಯೆಯೇನೂ ತಲೆದೋರಿಲ್ಲ. ಮುಂಗಾರು ಈಗ ತಾನೇ ಆರಂಭವಾಗುತ್ತಿರುವುದರಿಂದ ದಿನಕ್ಕಿಷ್ಟು, ವಾರಕ್ಕಿಷ್ಟು ಎಂದು ಕರಾರುವಾಕ್ಕಾಗಿ ನೀರು ಬಿಡಲು ಸಾಧ್ಯವಿಲ್ಲ ಎಂದು ಸಮರ್ಥಿಸಿಕೊಂಡಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X