ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಜಯಲಕ್ಷ್ಮಿ ಪಾಲಿಗೆ ಜನ್ಮದಿನವೇ ಮರಣ ದಿನ!

By Staff
|
Google Oneindia Kannada News

ವಿಜಯಲಕ್ಷ್ಮಿ ಪಾಲಿಗೆ ಜನ್ಮದಿನವೇ ಮರಣ ದಿನ!
ರಾಜಧಾನಿಯಲ್ಲಿ ವಾಯುವಿನ ಅಟ್ಟಹಾಸದ ವೇಗ ಗಂಟೆಗೆ 115ಕಿ.ಮೀ

ಬೆಂಗಳೂರು : ಜನ್ಮದಿನದ ಸಂಭ್ರಮ ಒಂದು ಕಡೆಯಾದರೆ, ಯಮಪುರಿಯ ಪ್ರಯಾಣ ಮತ್ತೊಂದು ಕಡೆ -ಇಂತಹ ನೋವಿನ ವರದಿಗೆ ವಸ್ತುವಾಗಿದ್ದು ವಿಜಯಲಕ್ಷ್ಮಿ.

ಭಾರತಿ ನಗರದ ಆರ್‌ಟಿಸಿ ಶಾಲೆಯಲ್ಲಿ ಆರನೇ ತರಗತಿ ಓದುತ್ತಿದ್ದ ಹನ್ನೆರಡು ವರ್ಷದ ವಿಜಯಲಕ್ಷ್ಮಿ, ಶಾಲೆ ಮುಗಿಸಿಕೊಂಡು ತನ್ನ ಸಹಪಾಠಿಗಳೊಂದಿಗೆ, ಮನೆಯತ್ತ ಧಾವಿಸುವಾಗ ಈ ದುರಂತ ಬುಧವಾರ ಸಂಭವಿಸಿದೆ.

ಮನೆಮಂದಿಯಾಂದಿಗೆ ಬರ್ತ್‌ಡೇ ಆಚರಿಸಿಕೊಳ್ಳುವ ವಿಜಯಲಕ್ಷ್ಮಿ ಸಂಭ್ರಮ ಕನಸಾಗಿಯೇ ಕೊನೆಯಾಗಿದೆ. ಆಕೆಗಾಗಿ ತಂದಿಟ್ಟಿದ್ದ ವಿಶೇಷ ಕೇಕ್‌ ಮನೆಯಲ್ಲಿ ಕೊಳೆಯುತ್ತಿದೆ!

ಶಾಲೆಯಿಂದ ಮಧ್ಯಾಹ್ನ ನಾಲ್ಕುಗಂಟೆ ಸುಮಾರಿನಲ್ಲಿ ಮನೆಗೆ ಮರಳುತ್ತಿದ್ದಾಗ, ಬಲವಾದ ಗಾಳಿ ಬೀಸುತ್ತಿರುವುದನ್ನು ಕಂಡು ಮಳೆ ಬರಬಹುದೆಂದು ವಿಜಯಲಕ್ಷ್ಮಿ ಮತ್ತು ಆಕೆಯ ಸಹಪಾಠಿಗಳು ವೇಗವಾಗಿಯೇ ಹೆಜ್ಜೆ ಹಾಕಿದ್ದಾರೆ.

ಈ ಸಂದರ್ಭದಲ್ಲಿ ಬಿರುಗಾಳಿಗೆ ರಸ್ತೆ ಬದಿಯ ತೆಂಗಿನ ಮರ ಬುಡಮೇಲಾಗಿ ವಿದ್ಯುತ್‌ತಂತಿಯ ಮೇಲೆ ಬಿದ್ದಿದೆ. ಮರದ ತೂಕಕ್ಕೆ ವಿದ್ಯುತ್‌ ಕಂಬ ಮುರಿದಿದೆ. ವಿದ್ಯುತ್‌ ಕಂಬ ಮತ್ತು ಮರ ಎರಡೂ ಸಹಾ ವಿಜಯಲಕ್ಷ್ಮಿ ಪ್ರಾಣವನ್ನು ಸೇರಿದಂತೆ, ಆಕೆಯ ಸಹಪಾಠಿ ಮತ್ತು ಸಹೋದರಿ ರಾಜಲಕ್ಷ್ಮಿ ಪ್ರಾಣವನ್ನು ಸಹಾ ಹೀರಿಕೊಂಡಿವೆ.

ಬುಧವಾರ ರಾಜಧಾನಿಯಲ್ಲಿ ಬಲವಾಗಿ ಬೀಸಿದ ಬಿರುಗಾಳಿ ವೇಗ 115 ಕಿ.ಮೀ ಎಂದು ಅಂದಾಜಿಸಲಾಗಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾಟ್ಸ್‌ ಹಾಟ್‌

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X