ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಳಬಾಗಿಲಿನಲ್ಲಿ ಶ್ರೀ ಶ್ರೀಪಾದರಾಜರ ಆರಾಧನೆ

By Staff
|
Google Oneindia Kannada News

ಮುಳಬಾಗಿಲಿನಲ್ಲಿ ಶ್ರೀ ಶ್ರೀಪಾದರಾಜರ ಆರಾಧನೆ
ಮೂರು ದಿನಗಳ ಕಾಲ ಧಾರ್ಮಿಕ ಕಾರ್ಯಕ್ರಮಗಳ ಮಹಾಪೂರ

ಬೆಂಗಳೂರು : ಕೋಲಾರ ಜಿಲ್ಲೆಯ ಮುಳಬಾಗಿಲಿನ ಶ್ರೀ ಶ್ರೀಪಾದರಾಜ ಮಠದಲ್ಲಿ ಬುಧವಾರ ಶ್ರೀ ಶ್ರೀಪಾದರಾಜರ ಉತ್ತರಾರಾಧನೆ ಯಶಸ್ವಿಯಾಗಿ ನೆರವೇರಿತು.

ಜಗದ್ಗುರು ಶ್ರೀಮನ್‌ ಮಧ್ವಾಚಾರ್ಯರ ಮೂಲ ಮಹಾ ಸಂಸ್ಥಾನದ ಶ್ರೀ ಪದ್ಮನಾಭ ತೀರ್ಥ ಪರಂಪರೆಯ ಈ ಮಠದಲ್ಲಿ ಜೂನ್‌ 20ರಂದು ಶ್ರೀ ಶ್ರೀಪಾದರಾಜರ ಪೂರ್ವಾರಾಧನೆ, ಜೂನ್‌ 21ರಂದು ಮಧ್ಯಾರಾಧನೆ ಮತ್ತು ರಥೋತ್ಸವಗಳು ನಡೆದವು. ಸಹಸ್ರಾರು ಮಂದಿ ಭಕ್ತಿಶ್ರದ್ಧೆಗಳಿಂದ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಕಾರ್ಯಕ್ರಮದ ಅಂಗವಾಗಿ ಸಂಸ್ಥಾನ ಪೂಜೆ, ರಥೋತ್ಸವ, ವಿದ್ವತ್‌ ಸಭಾ, ಸತ್ಯನಾರಾಯಣ ಪೂಜೆ, ತೆಪ್ಪೋತ್ಸವ, ಉಂಜಲೋತ್ಸವ ಮತ್ತು ಸಾಂಸ್ಕೃತಿಕ ಕಾಯಕ್ರಮಗಳು ಅದ್ಧೂರಿಯಿಂದ ಜರುಗಿದವು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X