ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮರಳು ಸಾಗಣೆ ಲಾರಿ ಮಾಲೀಕರ ಬಂದ್ಸಪ್ತಾಹ
ಮರಳು
ಸಾಗಣೆ
ಲಾರಿ
ಮಾಲೀಕರ
ಬಂದ್ಸಪ್ತಾಹ
ಸರ್ಕಾರ
ವಾರದೊಳಗೆ
ಸ್ಪಂದಿಸದಿದ್ದರೆ
ಮುಂದಿನ
ಕ್ರಮ
-ಚೆನ್ನಾರೆಡ್ಡಿ
ಸರ್ಕಾರ ನಮ್ಮ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ, ಮುಷ್ಕರವನ್ನು ಮುಂದುವರೆಸುವುದಾಗಿ ಸಂಘದ ಅಧ್ಯಕ್ಷ ಚೆನ್ನಾರೆಡ್ಡಿ ಎಚ್ಚರಿಸಿದ್ದಾರೆ.
ಈ ಮೊದಲು ಕೋಲಾರದಿಂದ ಮರಳು ಸಾಗಾಣಿಕೆ ನಡೆಯುತ್ತಿತ್ತು. ಸರ್ಕಾರ ಈ ಭಾಗದ ಮರಳು ಸಾಗಾಣಿಕೆಗೆ ನಿರ್ಬಂಧ ವಿಧಿಸಿದ ಕಾರಣ, ತುಮಕೂರಿನಿಂದ ಮರಳು ಸಾಗಾಣಿಕೆ ಮಾಡುವುದು ಅನಿವಾರ್ಯವಾಗಿದೆ. ಇದರಿಂದ ಲಾರಿ ಮಾಲೀಕರಿಗೆ ಆರ್ಥಿಕ ನಷ್ಟ ಉಂಟಾಗುತ್ತಿದೆ. ಅಲ್ಲದೇ ಪೋಲಿಸರ ಕಿರುಕುಳ ಸಹಾ ಮಿತಿ ಮೀರಿದೆ. ಈ ಬಗ್ಗೆ ಸರ್ಕಾರ ಮೌನವಹಿಸಿದ ಕಾರಣ, ಮುಷ್ಕರ ಅನಿವಾರ್ಯವಾಗಿದೆ ಎಂದು ಲಾರಿ ಮಾಲೀಕರು ದೂರಿದ್ದಾರೆ.
ಮರಳು ಸಾಗಾಣಿಕೆಗೆ ಸಂಬಂಧಿಸಿದಂತೆ ಸರ್ಕಾರ ವ್ಯವಸ್ಥಿತ ನೀತಿಯನ್ನು ಅನುಸರಿಸದ ಕಾರಣ, ಗೊಂದಲಗಳು ಉಂಟಾಗಿ, ನಾವು ಸಂಕಷ್ಟಕ್ಕೆ ಸಿಲುಕಿದ್ದೇವೆ ಎಂದು ಲಾರಿ ಮಾಲೀಕರು ಅಭಿಪ್ರಾಯಪಟ್ಟಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
Story first published: Tuesday, June 21, 2005, 23:53 [IST]