ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ದೇವೇಗೌಡರ ಬ್ಲಾಕ್‌ಮೇಲ್‌ ರಾಜಕಾರಣ ನಿಲ್ಲಲಿ’

By Staff
|
Google Oneindia Kannada News

‘ದೇವೇಗೌಡರ ಬ್ಲಾಕ್‌ಮೇಲ್‌ ರಾಜಕಾರಣ ನಿಲ್ಲಲಿ’
ರಾಜ್ಯದಲ್ಲಿ ಹೊಸ ಜನಾದೇಶ ಪಡೆಯಲು ಯಡಿಯೂರಪ್ಪ ಆಸಕ್ತಿ

ಬೆಂಗಳೂರು : ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ವಾಪಸ್ಸು ಪಡೆಯುವುದಾಗಿ ದೇವೇಗೌಡರು ಪದೇಪದೇ ಬ್ಲಾಕ್‌ಮೇಲ್‌ ಮಾಡುತ್ತಿದ್ದಾರೆ. ಕೂಡಲೇ ಬ್ಲಾಕ್‌ಮೇಲ್‌ ರಾಜಕಾರಣವನ್ನು ನಿಲ್ಲಿಸುವಂತೆ ಪ್ರತಿಪಕ್ಷದ ನಾಯಕ ಬಿ.ಎಸ್‌.ಯಡಿಯೂರಪ್ಪ ಒತ್ತಾಯಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದ ಅವರು, ಬೆಂಬಲವನ್ನು ವಾಪಸ್ಸು ಪಡೆದು ಜೆಡಿಎಸ್‌ ಹೊಸ ಜನಾದೇಶಕ್ಕೆ ಅವಕಾಶ ಕಲ್ಪಿಸಬೇಕು. ಪದೇಪದೇ ಬೆಂಬಲ ವಾಪಸ್ಸು ಪಡೆಯುವುದಾಗಿ ಹೇಳಿಕೆಗಳ ನೀಡಬಾರದು ಎಂದರು.

ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳಾದ ಕಾಂಗ್ರೆಸ್‌-ಜೆಡಿಎಸ್‌ ನಡುವೆ ಒಮ್ಮತವಿಲ್ಲ. ಹೀಗಾಗಿ ಮುಂದಿನ ಅಧಿವೇಶನದ ಹೊತ್ತಿಗೆ ಸರ್ಕಾರ ಉರುಳಿದರೂ ಅಚ್ಚರಿಯೇನಿಲ್ಲ. ಭೂಕಬಳಿಕೆಯನ್ನು ಮುಂದಿಟ್ಟುಕೊಂಡು ದೇವೇಗೌಡ ಸರ್ಕಾರದ ದಾರಿ ತಪ್ಪಿಸಿದ್ದಾರೆ ಎಂದು ಆರೋಪಿಸಿದರು.

ರಾಜ್ಯದ ಪ್ರಗತಿ ನಿಂತುಬಿಟ್ಟಿದೆ. ವೃತ್ತಿ ಶಿಕ್ಷಣ ಪ್ರವೇಶಕ್ಕೆ ಸಂಬಂಧಿಸಿದಂತೆ ಖಾಸಗಿ ಕಾಲೇಜುಗಳ ಜೊತೆ ಸರ್ಕಾರ ಲಾಬಿ ನಡೆಸಿದೆ. ಆರ್ಥಿಕ ಕ್ಷೇತ್ರಕ್ಕೆ ಸಂಬಂಧಿಸಿದಂತೆ, ಕಳೆದ ಮೂರು ತಿಂಗಳ ಅವಧಿಯ ಶ್ವೇತಪತ್ರವನ್ನು ಹೊರಡಿಸಬೇಕೆಂದು ಯಡಿಯೂರಪ್ಪ ಒತ್ತಾಯಿಸಿದರು.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X