ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಧರ್ಮಸಿಂಗ್‌ರಿಂದ ಈಗ ‘ಹೈಟೆಕ್‌ ನಗರ’ದ ಮಂತ್ರ!

By Staff
|
Google Oneindia Kannada News

ಧರ್ಮಸಿಂಗ್‌ರಿಂದ ಈಗ ‘ಹೈಟೆಕ್‌ ನಗರ’ದ ಮಂತ್ರ!
ತುಮಕೂರನ್ನು ಸೆಟಲೈಟ್‌ನಗರವನ್ನಾಗಿ ರೂಪಿಸುವುದಾಗಿ ಮುಖ್ಯಮಂತ್ರಿ ಘೋಷಣೆ

ತುಮಕೂರು : ಹೈಟೆಕ್‌ ಸಿಟಿಯನ್ನಾಗಿ ರಾಜಧಾನಿಯನ್ನು ರೂಪಿಸಲು ನಮ್ಮ ಸರ್ಕಾರ ಮುಂದಾಗಿದೆ. ಅಲ್ಲದೇ ಬೆಂಗಳೂರಿನ ಉಪನಗರವನ್ನಾಗಿ ತುಮಕೂರು ನಗವನ್ನು ಅಭಿವೃದ್ಧಿಪಡಿಸುವುದಾಗಿ ಮುಖ್ಯಮಂತ್ರಿ ಎನ್‌.ಧರ್ಮಸಿಂಗ್‌ ಘೋಷಿಸಿದ್ದಾರೆ.

ದೇವರಾಯನದುರ್ಗದಲ್ಲಿ ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ನೇರವೇರಿಸಿ ಮಾತನಾಡಿದ ಅವರು, ಈ ನಿಟ್ಟಿನಲ್ಲಿ ದೆಹಲಿ ಡೆವಲಪ್‌ಮೆಂಟ್‌ ಆ್ಯಕ್ಟ್‌ ಮಾದರಿಯಲ್ಲಿ ಬೆಂಗಳೂರು ಡೆವಲಪ್‌ಮೆಂಟ್‌ ಆ್ಯಕ್ಟ್‌ ಜಾರಿಗೆ ತರುವುದಾಗಿ ಹೇಳಿದರು.

ದೇಶದಲ್ಲಿ ದೆಹಲಿ, ಕೊಲ್ಕತಾ, ಮುಂಬಯಿ ನಂತರದ ಸ್ಥಾನದಲ್ಲಿ ಬೆಂಗಳೂರು ವೇಗವಾಗಿ ಬೆಳೆಯುತ್ತಿದೆ. ಐಟಿ-ಬಿಟಿ ಕ್ಷೇತ್ರದಲ್ಲಿ ಬೆಂಗಳೂರು ವಿಶ್ವದ ಗಮನ ಸೆಳೆದಿದೆ. ಹೀಗಾಗಿ ಬೆಂಗಳೂರಿನ ಹಸಿರುಪಟ್ಟಿ ವಿಚಾರಕ್ಕಿಂತಲೂ, ಹೈಟೆಕ್‌ ನಗರವನ್ನಾಗಿಸುವ ಆದ್ಯತೆ ಸದ್ಯಕ್ಕೆ ನಮ್ಮ ಮುಂದಿದೆ ಎಂದರು.

ಸಚಿವ ಬಿ.ಸತ್ಯನಾರಾಯಣ, ಎಂ.ಪಿ.ಪ್ರಕಾಶ್‌, ಮಾಜಿ ಸಚಿವ ಡಾ.ಜಿ.ಪರಮೇಶ್ವರ್‌ ಮತ್ತಿತರರು ಸಮಾರಂಭದಲ್ಲಿ ಹಾಜರಿದ್ದರು.

(ಇನ್ಫೋ ವಾರ್ತೆ)

ಮುಖಪುಟ / ಧರ್ಮ-ಕಾರಣ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X