ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾರು-ಲಾರಿಡಿಕ್ಕಿ:ಬಿಎಸ್‌ ಕುಟುಂಬದ ನಾಲ್ವರ ಸಾವು

By Staff
|
Google Oneindia Kannada News

ಕಾರು-ಲಾರಿಡಿಕ್ಕಿ:ಬಿಎಸ್‌ ಕುಟುಂಬದ ನಾಲ್ವರ ಸಾವು
ಮದುವೆ ನಿಶ್ಚಿತಾರ್ಥಕ್ಕೆ ತೆರಳಿದ ಮಂದಿ ಮತ್ತೆ ಮನೆಗೆ ಮರಳಲಿಲ್ಲ...

ಹುಬ್ಬಳ್ಳಿ : ಲಾರಿ ಮತ್ತು ಕಾರಿನ ನಡುವೆ ಸಂಭವಿಸಿರುವ ಭೀಕರ ವಾಹನ ಅಪಘಾತದಲ್ಲಿ ದಾವಣಗೆರೆಯ ಪ್ರಖ್ಯಾತ ಜವಳಿ ಅಂಗಡಿ ಬಿ.ಎಸ್‌.ಚನ್ನಬಸಪ್ಪ ಅವರ ಕುಟುಂಬಕ್ಕೆ ಸೇರಿದ ನಾಲ್ವರು ಮೃತಪಟ್ಟಿದ್ದಾರೆ.

ಬೆಳಗಾವಿಯಲ್ಲಿ ಏರ್ಪಡಿಸಲಾಗಿದ್ದ ಮದುವೆ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಕಾರಿನಲ್ಲಿ ತೆರಳುತ್ತಿದ್ದಾಗ, ರಭಸದಿಂದ ಎದುರಿಗೆ ಬಂದ ಲಾರಿಯಾಂದು ಡಿಕ್ಕಿ ಹೊಡೆದು ಧಾರವಾಡದ ಯರಿಕೊಪ್ಪ ಸಮೀಪ ಈ ದುರಂತ ಸಂಭವಿಸಿದೆ.

ಮೃತಪಟ್ಟವರನ್ನು ರಾಜು, ಪ್ರವೀಣ್‌, ಮನೋಹರ್‌ ಮತ್ತು ಅರ್ಶಿತಾ ಎಂದು ಗುರ್ತಿಸಲಾಗಿದೆ. ಮೃತರಾದ ಪ್ರವೀಣ್‌ ಮತ್ತು ರಾಜು ಅವರನ್ನು ಬಿ.ಎಸ್‌.ಚನ್ನಬಸಪ್ಪ ಅವರ ಮೊಮ್ಮಕ್ಕಳು ಎನ್ನಲಾಗಿದೆ. ರಾಜು ಮತ್ತು ಪ್ರವೀಣ್‌ ಮಾಜಿ ಸಂಸದ ವಿಜಯ ಸಂಕೇಶ್ವರ್‌ ಅವರ ಹತ್ತಿರದ ಸಂಬಂಧಿಗಳು ಎಂದು ಮೂಲಗಳು ತಿಳಿಸಿವೆ.

(ಏಜನ್ಸೀಸ್‌)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X