ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೃಷ್ಣ ಮೃಗ ಪ್ರಕರಣ: ಪಟೌಡಿ ನ್ಯಾಯಾಲಯಕ್ಕೆ ಶರಣು

By Staff
|
Google Oneindia Kannada News

ಕೃಷ್ಣ ಮೃಗ ಪ್ರಕರಣ: ಪಟೌಡಿ ನ್ಯಾಯಾಲಯಕ್ಕೆ ಶರಣು
ಪ್ರಕರಣಕ್ಕೆ ಸಂಬಂಧಿಸಿದಂತೆ ಉಳಿದ ಐವರು ಆರೋಪಿಗಳು ನಾಪತ್ತೆ

ಝಜ್ಜರ್‌ : ಕೃಷ್ಣ ಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಮನ್ಸೂರ್‌ ಆಲಿ ಖಾನ್‌ ಪಟೌಡಿ ಅವರು, ಝಜ್ಜರ್‌ ನ್ಯಾಯಾಲಯಕ್ಕೆ ಶನಿವಾರ ಶರಣಾದರು.

ತೀವ್ರ ಕುತೂಹಲ ಮೂಡಿಸಿದ್ದ ಈ ಪ್ರಕರಣಕ್ಕೆ, ಪಟೌಡಿ ಶರಣಾಗತಿಯಿಂದ ತೆರೆಬಿದ್ದಿದೆ. ನ್ಯಾಯಾಲಯ ಪಟೌಡಿ ಅವರನ್ನು ಒಂದು ದಿನ ಪೋಲಿಸ್‌ ವಶಕ್ಕೆ ಒಪ್ಪಿಸಿದೆ.

ಪಂಜಾಬ್‌-ಹರಿಯಾಣ ಹೈಕೋರ್ಟ್‌ ಪಟೌಡಿ ಅವರ ನಿರೀಕ್ಷಾ ಜಾಮೀನಿನ ಅರ್ಜಿಯನ್ನು ಶುಕ್ರವಾರ ವಜಾಗೊಳಿಸಿದ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಅವರು ಶರಣಾಗಿದ್ದಾರೆ.

ಕೃಷ್ಣಮೃಗ ಮತ್ತು ಮೊಲ ಕೊಂದ ಆರೋಪದ ಹಿನ್ನೆಲೆ ಪಟೌಡಿ ಮತ್ತು ಶಶಿಸಿಂಗ್‌ ಅವರ ವಿರುದ್ಧ ಪೋಲಿಸರು ಪ್ರಕರಣ ದಾಖಲಿಸಿದ್ದರು.

(ಏಜನ್ಸೀಸ್‌)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X