ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿದ್ದು ಸೇರಿದಂತೆ 5ಸಚಿವರು ಅಪಾಯದಿಂದ ಪಾರು

By Staff
|
Google Oneindia Kannada News

ಸಿದ್ದು ಸೇರಿದಂತೆ 5ಸಚಿವರು ಅಪಾಯದಿಂದ ಪಾರು
ಗುರಿತಪ್ಪಿದ ಹಿಟಾಚಿ, ಕೂದಲೆಳೆ ಅಂತರದಲ್ಲಿ ತಪ್ಪಿದ ಅನಾಹುತ

ಮೈಸೂರು : ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಐವರು ಸಚಿವರು ಪವಾಡ ಸದೃಶವಾಗಿ ಶುಕ್ರವಾರ ಬದುಕುಳಿದ ಘಟನೆ ವರದಿಯಾಗಿದೆ.

ಮೈಸೂರು-ಬಂಟ್ವಾಳ ಹೆದ್ದಾರಿ ರಸ್ತೆ ಕಾಮಗಾರಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಉಪಮುಖ್ಯಮಂತ್ರಿ ಸಿದ್ಧರಾಮಯ್ಯ, ಸಚಿವರಾದ ಎಚ್‌.ಡಿ.ರೇವಣ್ಣ, ಚೆಲುರಾಯಸ್ವಾಮಿ, ಎಚ್‌.ಸಿ.ಮಹಾದೇವಪ್ಪ, ಡಿ.ಟಿ.ಜಯಕುಮಾರ್‌, ಎಚ್‌.ಎಸ್‌.ಮಹಾದೇವಪ್ರಸಾದ್‌ ಮತ್ತು ತನ್ವೀರ್‌ ಸೇಠ್‌ ಕೂದಲೆಳೆಯ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ.

ಸಿದ್ದರಾಮಯ್ಯ ಅವರು ಹಿಟಾಚಿ ಯಂತ್ರವನ್ನು ಚಲಾಯಿಸಿ ಕಾಮಗಾರಿಯ ಉದ್ಘಾಟನೆ ನೇರವೇರಿಸಲು ಮುಂದಾದಾಗ, ಹಿಟಾಚಿ ಆಡ್ಡಾದಿಡ್ಡಿಯಾಗಿ ಸಾಗತೊಡಗಿತು. ದಿಕ್ಕುತಪ್ಪಿ ಚಲಿಸಿದ ಹಿಟಾಚಿಯಿಂದ ಮೂವರು ಗಾಯಗೊಂಡರು. ಅನಿರೀಕ್ಷಿತ ಘಟನೆಯಿಂದ ನೆರೆದಿದ್ದ ಜನರು ಗಾಬರಿಯಾಗಿ ಚೆಲ್ಲಾಪಿಲ್ಲಿಯಾಗಿ ಓಡಿದರು. ನಂತರ ಹಿಟಾಚಿ ಹತೋಟಿಗೆ ಸಿಕ್ಕಿತು ಎನ್ನಲಾಗಿದೆ.

ಸಮೀಪದಲ್ಲಿಯೇ ಇದ್ದ ಹೈಟೆನ್‌ಷನ್‌ ವಿದ್ಯುತ್‌ ಮಾರ್ಗಕ್ಕೆ ಹಿಟಾಚಿ ಡಿಕ್ಕಿ ಹೊಡೆದಿದ್ದರೆ, ಭಾರೀ ಅನಾಹುತ ಸಂಭವಿಸುತ್ತಿತ್ತು.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X