ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೆಟ್ರೊ ರೈಲನ್ನು ಕಸಿಯಲು ಜಯಲಲಿತಾ ಹುನ್ನಾರ

By Staff
|
Google Oneindia Kannada News

ಮೆಟ್ರೊ ರೈಲನ್ನು ಕಸಿಯಲು ಜಯಲಲಿತಾ ಹುನ್ನಾರ
ಶಾಮನೂರು ಶಿವಶಂಕರಪ್ಪ ಅವರ 75ನೇ ಹುಟ್ಟು ಹಬ್ಬದಲ್ಲಿ ಧರ್ಮಸಿಂಗ್‌

ದಾವಣಗೆರೆ : ಮೆಟ್ರೊ ರೈಲು ರಾಜಧಾನಿ ಕೈತಪ್ಪದಂತೆ ಎಚ್ಚರವಹಿಸಬೇಕಾಗಿದೆ. ಆಂಧ್ರ, ಮಹಾರಾಷ್ಟ್ರ ಮತ್ತು ತಮಿಳುನಾಡು ಸರ್ಕಾರಗಳು ಯೋಜನೆಯನ್ನು ದಕ್ಕಿಸಿಕೊಳ್ಳಲು ಕೇಂದ್ರದ ಮೇಲೆ ಒತ್ತಡ ಹೇರುತ್ತಿವೆ ಎಂದು ಮುಖ್ಯಮಂತ್ರಿ ಎನ್‌.ಧರ್ಮಸಿಂಗ್‌ ಹೇಳಿದರು.

ಶಾಸಕ ಶಾಮನೂರು ಶಿವಶಂಕರಪ್ಪ ಅವರ 75ನೇ ಹುಟ್ಟು ಹಬ್ಬದ ಕಾರ್ಯಕ್ರಮಕ್ಕಾಗಿ ನಗರಕ್ಕೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಈಗಾಗಲೇ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಯೋಜನಾ ಆಯೋಗಕ್ಕೆ ಪತ್ರ ಬರೆದು, ಮೆಟ್ರೊಯೋಜನೆಯನ್ನು ಬೆಂಗಳೂರಿನಿಂದ ಚೆನ್ನೈಗೆ ವರ್ಗಾಯಿಸುವಂತೆ ಕೋರಿದ್ದಾರೆ. ಹೀಗಾಗಿ ರಾಜ್ಯ ಎಚ್ಚರವಹಿಸಬೇಕಾಗಿದೆ. ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಯೋಜನೆ ಬಗ್ಗೆ ಎತ್ತಿರುವ ಆಕ್ಷೇಪಗಳ ಬಗೆಗೆ ಸರ್ಕಾರ ಅವರೊಂದಿಗೆ ಚರ್ಚಿಸಲಿದೆ ಎಂದರು.

ಹುಟ್ಟು ಹಬ್ಬ : ಶಾಮನೂರು ಶಿವಶಂಕರಪ್ಪ ಅವರ ಹುಟ್ಟುಹಬ್ಬದ ಸಮಾರಂಭದಲ್ಲಿ ಮಹಾರಾಷ್ಟ್ರದ ರಾಜ್ಯಪಾಲ ಎಸ್‌. ಎಂ. ಕೃಷ್ಣ , ಕೇಂದ್ರ ಸಚಿವ ಎಂ. ವಿ. ರಾಜಶೇಖರನ್‌, ಆಸ್ಕರ್‌ ಫರ್ನಾಂಡೀಸ್‌, ಶಿವರಾಜ್‌ ಪಾಟೀಲ್‌, ಪಾರ್ವತಮ್ಮ ಶಿವಶಂಕರಪ್ಪ , ನಟ ಮತ್ತು ಸಂಸದ ಅಂಬರೀಷ್‌ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು.

(ಇನ್ಫೋ ವಾರ್ತೆ)

ಮುಖಪುಟ / ಧರ್ಮ-ಕಾರಣ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X