ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನೀಮಿಯಾ ತರುವ ಸಾದಾ ಉಪ್ಪು ಮಾರಾಟ ಬಂದ್‌

By Staff
|
Google Oneindia Kannada News

ಅನೀಮಿಯಾ ತರುವ ಸಾದಾ ಉಪ್ಪು ಮಾರಾಟ ಬಂದ್‌
ಅಯೋಡಿನ್‌ ಕೊರತೆಯಿಂದ ದೇಶದ ಶೇ.75ರಷ್ಟು ಮಹಿಳೆಯರಿಗೆ ಅನೀಮಿಯಾ -ಎ.ರಾಮದಾಸ್‌

ನವದೆಹಲಿ : ಕಬ್ಬಿಣ ಮತ್ತು ಅಯೋಡಿನ್‌ಯುಕ್ತ ಉಪ್ಪು ಮಾರಾಟವನ್ನು ಆಗಸ್ಟ್‌ 15ರ ನಂತರ ಕಡ್ಡಾಯವಾಗಿ ರಾಷ್ಟ್ರದೆಲ್ಲೆಡೆ ಜಾರಿಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಕೇಂದ್ರ ಆರೋಗ್ಯ ಸಚಿವ ಎ.ರಾಮದಾಸ್‌ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾದಾ ಉಪ್ಪಿನ ಮಾರಾಟದಿಂದ ಆರೋಗ್ಯದ ಮೇಲಾಗುವ ಅಡ್ಡಪರಿಣಾಮಗಳನ್ನು ಚಿಂತನೆ ನಡೆಸಿರುವ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ ಎಂದರು.

ಉಪ್ಪಿನ ಕಂಪನಿಗಳಿಗೆ ಎರಡು ತಿಂಗಳ ಗಡುವು ನೀಡಿದ್ದು, ಅವಧಿ ನಂತರ ಅಯೋಡೀಕೃತ ಉಪ್ಪು ಮಾರಾಟವನ್ನು ಕಡ್ಡಾಯವಾಗಿ ಜಾರಿಗೊಳಿಸಲಾಗುವುದು. ಈ ಪರಿಣಾಮ ಹತ್ತಿಪ್ಪತ್ತು ಪೈಸೆಗಳಷ್ಟು ದರ ಹೆಚ್ಚಳವಾಗಬಹುದು ಎಂದು ಸಚಿವರು ಹೇಳಿದರು.

ಅಯೋಡಿನ್‌ ಯಾಕೆ? : ಸಾದಾ ಉಪ್ಪಿನ ಬಳಕೆಯಿಂದ ಆಯೋಡಿನ್‌ ಮತ್ತು ಕಬ್ಬಿಣದಂಶದ ಕೊರತೆ ಉಂಟಾಗಿ ದೇಶದ ಶೇ. 70ರಷ್ಟು ಮಕ್ಕಳು ಮತ್ತು ಶೇ. 75ರಷ್ಟು ಮಹಿಳೆಯರಲ್ಲಿ ಅನೀಮಿಯಾ ಕಂಡು ಬಂದಿದೆ. ಮಕ್ಕಳ ಬೆಳವಣಿಗೆಗೆ ಅಯೋಡಿನ್‌ ಜತೆಗೆ ಕಬ್ಬಿಣದಂಶ ಅತ್ಯಗತ್ಯ.

(ಏಜನ್ಸೀಸ್‌)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X