ಮೌಂಟ್ ಎವರೆಸ್ಟ್ ಮೇಲೆ ಕನ್ನಡ ಧ್ವಜ, ಜೈ ಗಣೇಶ್!
ಮೌಂಟ್
ಎವರೆಸ್ಟ್
ಮೇಲೆ
ಕನ್ನಡ
ಧ್ವಜ,
ಜೈ
ಗಣೇಶ್!
ದಕ್ಷಿಣ
ಭಾರತದ
ಮೊದಲ
ಎವರೆಸ್ಟ್
ಶಿಖರಗಾಮಿ
ಎಂಬ
ಹೆಗ್ಗಳಿಕೆಗೆ
ಪಡುಬಿದ್ರಿ
ಪಿಎಸ್ಐ
ಎವರೆಸ್ಟ್ ಶಿಖರಾರೋಹಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ದಕ್ಷಿಣ ಭಾರತದ ಪ್ರಥಮ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಪಿ.ಎನ್.ಗಣೇಶ್, ಪಡುಬಿದ್ರಿಯಲ್ಲಿ ಪೋಲಿಸ್ ಸಬ್ಇನ್ಸ್ಪೆಕ್ಟರ್ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ವಿಶ್ವ ಶಾಂತಿ ಮತ್ತು ಭ್ರಾತೃತ್ವ ಸಂದೇಶವನ್ನು ಸಾರಲು ಗಣೇಶ್ತಂಡ ಯಾತ್ರೆ ಕೈಗೊಂಡಿತ್ತು. ಅಮೆರಿಕದ ಸಿ.ಜಾಕ್ಸನ್, ಅರ್ಜೆಂಟೈನಾದ ಜೋಸ್ಜಿಲಾನ್, ಬ್ರಿಟನ್ನಿನ ಜಿ.ಪಾರ್ಕರ್, ಆಸ್ಟ್ರೇಲಿಯಾದ ಕೆನ್ಹಿಲ್ ಹಾಗೂ ಪೋಲೆಂಡ್ನ ಮಾರ್ಟಿನ್ ಅವರನ್ನೊಳಗೊಂಡ ಚಾರಣಯಾತ್ರೆ ತಂಡಕ್ಕೆ ಗಣೇಶ್ ಸಾರಥ್ಯವಹಿಸಿದ್ದರು.
ಇತ್ತೀಚೆಗೆ ಹಿಮಗಿರಿಯಲ್ಲಿ ಕಣ್ಮರೆಯಾದ ವಾಯುಪಡೆ ಅಧಿಕಾರಿ ಚಿತ್ರದುರ್ಗದ ಚೈತನ್ಯ ಅವರಿದ್ದ ತಂಡ, ಗಣೇಶ್ ನೇತೃತ್ವದ ತಂಡಕ್ಕಿಂತ ಮೂರು ದಿನ ಮೊದಲೇ ಎವೆರೆಸ್ಟ್ ಶಿಖರದ ತುಟ್ಟ ತುದಿಯನ್ನು ತಲುಪಿತ್ತು. ದುರದೃಷ್ಟವೆಂಬಂತೆ ಶಿಖರವನ್ನು ಇಳಿಯುವಾಗ ಚೈತನ್ಯ ನಾಪತ್ತೆಯಾಗಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು