ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೊಲೀಸ್‌ ಆಯುಕ್ತರಾಗಿ ಅಜಯ್‌ಕುಮಾರ್‌ ಸಿಂಗ್‌

By Staff
|
Google Oneindia Kannada News

ಪೊಲೀಸ್‌ ಆಯುಕ್ತರಾಗಿ ಅಜಯ್‌ಕುಮಾರ್‌ ಸಿಂಗ್‌
ಎಸ್‌.ಮರಿಸ್ವಾಮಿಗೆ ಅಗ್ನಿಶಾಮಕದಳ ಮತ್ತು ಗೃಹ ರಕ್ಷಕದಳ ವಿಭಾಗದ ಡಿಜಿಪಿಯಾಗಿ ಬಡ್ತಿ

Ajay Kumar Singhಬೆಂಗಳೂರು : ನೇಮಕಾತಿ ಮತ್ತು ತರಬೇತಿ ವಿಭಾಗದ ಹೆಚ್ಚುವರಿ ಪೊಲೀಸ್‌ ಮಹಾ ನಿರ್ದೇಶಕ ಡಾ.ಅಜಯ್‌ಕುಮಾರ್‌ ಸಿಂಗ್‌ ಅವರನ್ನು ನಗರದ ನೂತನ ಪೊಲೀಸ್‌ ಆಯುಕ್ತರಾಗಿ ಸರ್ಕಾರ ನೇಮಕಮಾಡಿದೆ.

ಉತ್ತರ ಪ್ರದೇಶ ಮೂಲದ ಸಿಂಗ್‌ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ ಹೊಂದಿದ್ದಾರೆ. ಅವರ ಕಥಾ ಸಂಕಲನ ಪ್ರಕಟಗೊಂಡಿದೆ. ‘ಅಲ್ಲಮಪ್ರಭು ಮತ್ತು ಸಂತ ಕಬೀರರ ನಡುವಿನ ಸಾಮ್ಯತೆಗಳು’ ವಿಚಾರವಾಗಿ ಸಿಂಗ್‌ ಬರೆದ ಪ್ರಬಂಧಕ್ಕೆ ಡಾಕ್ಟರೇಟ್‌ ಗೌರವ ಲಭಿಸಿದೆ. ಸಿಂಗ್‌ ಅವರ ಪತ್ನಿ ತಾರಾ ಐಎಎಸ್‌ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಈವರೆಗೆ ಪೊಲೀಸ್‌ ಆಯುಕ್ತರಾಗಿ ಸೇವೆ ಸಲ್ಲಿಸಿದ್ದ ಎಸ್‌.ಮರಿಸ್ವಾಮಿ ಅವರಿಗೆ ರಾಜ್ಯ ಅಗ್ನಿಶಾಮಕದಳ ಹಾಗೂ ಗೃಹ ರಕ್ಷಕದಳ ವಿಭಾಗದ ಡಿಜಿಪಿಯಾಗಿ ಬಡ್ತಿ ದೊರೆತಿದೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X