ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಎಲ್.ಕೆ.ಆಡ್ವಾಣಿ ರಾಜೀನಾಮೆ
ಬಿಜೆಪಿ
ಅಧ್ಯಕ್ಷ
ಸ್ಥಾನಕ್ಕೆ
ಎಲ್.ಕೆ.ಆಡ್ವಾಣಿ
ರಾಜೀನಾಮೆ
ಸಂಘ
ಪರಿವಾರ
ಮತ್ತು
ಬಿಜೆಪಿ
ನಡುವೆ
ಮತ್ತೊಂದು
ಬಿಕ್ಕಟ್ಟು
ಪಾಕಿಸ್ತಾನದ ನೇತಾರ ಮೊಹಮ್ಮದ್ ಆಲಿ ಜಿನ್ನಾ ಅವರನ್ನು ಜಾತ್ಯತೀತ ವ್ಯಕ್ತಿ ಎಂದು ಬಣ್ಣಿಸಿ ಆಡ್ವಾಣಿ ನೀಡಿದ್ದ ಹೇಳಿಕೆಯಿಂದ, ಆರ್ಎಸ್ಎಸ್ ಮತ್ತು ವಿಶ್ವಹಿಂದೂ ಪರಿಷತ್ ಅಸಮಾಧಾನ ವ್ಯಕ್ತಪಡಿಸಿದ್ದವು. ಅವರನ್ನು ದೇಶದ್ರೋಹಿ ಎಂದು ಟೀಕಿಸಿದ್ದ ವಿಶ್ವಹಿಂದೂ ಪರಿಷತ್, ಅವರ ರಾಜೀನಾಮೆಗೆ ಒತ್ತಾಯಿಸಿತ್ತು. ಈ ಟೀಕೆಗಳ ಬೆನ್ನಲ್ಲಿ ಆಡ್ವಾಣಿ ರಾಜೀನಾಮೆ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.
ಜಿನ್ನಾ ಅವರ ಬಗ್ಗೆ ಆಡ್ವಾಣಿ ನೀಡಿದ್ದ ಹೇಳಿಕೆಯನ್ನು ಬೆಂಬಲಿಸಿರುವ ಮಾಜಿ ಪ್ರಧಾನಿ ವಾಜಪೇಯಿ, ಇಂಡೋ-ಪಾಕ್ ಸ್ನೇಹವನ್ನು ಜಿನ್ನಾ ಬೆಂಬಲಿಸಿದ್ದರು ಎಂದು ಅಭಿಪ್ರಾಯಪಟ್ಟಿದ್ದಾರೆ.
ಆಡ್ವಾಣಿ ರಾಜೀನಾಮೆ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಆರ್ಎಸ್ಎಸ್ ವಕ್ತಾರ ರಾಮ್ ಮಾಧವ್, ನಮಗೆ ನಾಯಕತ್ವ ಬದಲಾವಣೆಗಿಂತಲೂ, ಚಿಂತನೆಯ ಬದಲಾವಣೆ ಅಗತ್ಯವಾಗಿತ್ತು ಎಂದಿದ್ದಾರೆ.
ತಮ್ಮ ಪಾಕ್ ಪ್ರವಾಸದಲ್ಲಿ ಆಡ್ವಾಣಿ ಬಾಬ್ರಿ ಮಸೀದಿ ನಾಶಕ್ಕೆ ಪಶ್ಚಾತ್ತಾಪ ವ್ಯಕ್ತಪಡಿಸಿದ್ದು, ಸಹಾ ತೀವ್ರ ವಿವಾದಕ್ಕೆ ಕಾರಣವಾಗಿದೆ.
ಪಾಕ್
ಪ್ರವಾಸ
ಮುಗಿಸಿ
ಸೋಮವಾರ
ಭಾರತಕ್ಕೆ
ಆಗಮಿಸಿದ್ದ
ಆಡ್ವಾಣಿ,
ನನ್ನ
ಹೇಳಿಕೆಗಳಿಗೆ
ನಾನು
ಬದ್ಧನಾಗಿದ್ದೇನೆ.
ಈ
ಬಗ್ಗೆ
ಸಮಗ್ರ
ಚರ್ಚೆಗೆ
ಸಿದ್ಧ
ಎಂದಿದ್ದರು.
(ಏಜನ್ಸೀಸ್)
ಮುಖಪುಟ / ವಾರ್ತೆಗಳು