ಜೂ.14ರ ಅಆಇಈ ಚಳವಳಿ ನಿಲ್ಲದು : ಚಂಪಾ ಸ್ಪಷ್ಟನೆ
ಜೂ.14ರ
ಅಆಇಈ
ಚಳವಳಿ
ನಿಲ್ಲದು
:
ಚಂಪಾ
ಸ್ಪಷ್ಟನೆ
ಒಂದನೇ
ತರಗತಿಯಿಂದಲೇ
ಆಂಗ್ಲಭಾಷೆ
ಅನುಷ್ಠಾನ
ಸಲ್ಲದು
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದರಿಂದ ಏಳನೇ ತರಗತಿಯವರೆಗ ಕನ್ನಡ ಮಾಧ್ಯಮ ಶಿಕ್ಷಣಕ್ಕೆ ಒತ್ತಾಯ ಮತ್ತು ಒಂದನೇ ತರಗತಿಯಿಂದಲೇ ಇಂಗ್ಲಿಷ್ ಕಲಿಕೆ ಬೇಡ ಎಂಬ ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದರು.
ನಮ್ಮ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಿ, ಆದೇಶ ಹೊರಡಿಸುವ ತನಕ ಚಳವಳಿ ನಿಲ್ಲಿಸುವ ಮಾತೇ ಇಲ್ಲ. ನಾವು ಅಸಾಧ್ಯವಾದುದೇನನ್ನೂ ಕೇಳುತ್ತಿಲ್ಲ. ಸುಪ್ರೀಂ ಕೋರ್ಟ್ನ ಆದೇಶದಂತೆ ಕಾನೂನು ಜಾರಿಗೊಳಿಸಿ ಎಂದಷ್ಟೇ ಕೇಳುತ್ತಿದ್ದೇವೆ. ಈ ಚಳವಳಿಯನ್ನು ಯಾವುದೇ ಒಂದು ವರ್ಗ, ಸಮುದಾಯದ ಹಿತದೃಷ್ಟಿಯಿಂದ ಮಾಡುತ್ತಿಲ್ಲ ಎಂದರು.
ಶಿಕ್ಷಣ ಸಮಸ್ಯೆಯನ್ನು ದಲಿತ-ಪುರೋಹಿತ ವರ್ಗದ ನಡುವಿನ ಸಮಸ್ಯೆ ಎಂದು ಕೆಲವರು ಹಾದಿ ತಪ್ಪಿಸುತ್ತಿದ್ದಾರೆ. ಕನ್ನಡಪರ ಎಂದರೆ ದಲಿತ ವಿರೋಧಿ ಎಂಬ ಭಾವನೆ ಹುಟ್ಟುಹಾಕಲಾಗುತ್ತಿದೆ. ಕೆಲವು ಚಿಲ್ಲರೆ ರಾಜಕಾರಣಿಗಳಿಗೆ ಇವೆಲ್ಲ ಅರ್ಥವಾಗುವುದಿಲ್ಲ ಎಂದು ಚಂಪಾ ಅಭಿಪ್ರಾಯಪಟ್ಟರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು