ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾನುವಾರ ಎಸ್‌.ಬಂಗಾರಪ್ಪ ಅವರ ಭವಿಷ್ಯನಿರ್ಧಾರ

By Staff
|
Google Oneindia Kannada News

ಭಾನುವಾರ ಎಸ್‌.ಬಂಗಾರಪ್ಪ ಅವರ ಭವಿಷ್ಯನಿರ್ಧಾರ
ಶಿವಮೊಗ್ಗ, ಚಾಮರಾಜಪೇಟೆ ಉಪಚುನಾವಣೆಯ ಮತಎಣಿಕೆ

ಬೆಂಗಳೂರು : ಶಿವಮೊಗ್ಗ ಲೋಕಸಭೆ ಹಾಗೂ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶದತ್ತ ಎಲ್ಲರ ಕಣ್ಣು ನೆಟ್ಟಿವೆ.

ಮತ ಎಣಿಕೆ ಭಾನುವಾರ(ಜೂ.5) ಬೆಳಿಗ್ಗೆ 8ಗಂಟೆಯಿಂದ ಶಿವಮೊಗ್ಗ ಮತ್ತು ಚಾಮರಾಜಪೇಟೆಯಲ್ಲಿ ಆರಂಭಗೊಳ್ಳಲಿದೆ. ಮತ ಎಣಿಕೆ ಕೇಂದ್ರಗಳಲ್ಲಿ ಗಂಟೆಗೊಮ್ಮೆ ಮತಎಣಿಕೆಯ ವಿವರಗಳನ್ನು ಪ್ರಕಟಿಸುವ ವ್ಯವಸ್ಥೆ ಮಾಡಲಾಗಿದ್ದು, ಮತ ಎಣಿಕೆಯ ಒಂದು ಸುತ್ತಿಗೆ ಹತ್ತು ಯಂತ್ರಗಳನ್ನು ತೆಗೆದುಕೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಜನಾರ್ದನ ಪೂಜಾರಿ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಮಾಜಿ ಮುಖ್ಯಮಂತ್ರಿ ಎಸ್‌.ಬಂಗಾರಪ್ಪ ಅವರ ಸಮಾಜವಾದಿ ಪಕ್ಷದ ಭವಿಷ್ಯ, ಶಿವಮೊಗ್ಗ ಚುನಾವಣೆಯ ಫಲಿತಾಂಶವನ್ನು ಅವಲಂಭಿಸಿದೆ.

ಉಪಚುನಾವಣೆಯ ಫಲಿತಾಂಶಗಳು ರಾಜ್ಯ ಸರ್ಕಾರದ ಮೇಲೆ ಪರಿಣಾಮ ಬೀರಲಿದೆಯೇ ಎಂಬುದನ್ನು ಕಾದು ನೋಡಬೇಕು.
(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X