ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಸಿಬಿ ಪೊಲೀಸರಿಂದ ಅಪಹೃತ ಯುವತಿಗೆ ವಿಮೋಚನೆ

By Staff
|
Google Oneindia Kannada News

ಸಿಸಿಬಿ ಪೊಲೀಸರಿಂದ ಅಪಹೃತ ಯುವತಿಗೆ ವಿಮೋಚನೆ
24ಗಂಟೆಯಾಳಗೆ ಸುಖಾಂತ ಕಂಡ ಅಪಹರಣ ಪ್ರಕರಣ, ಉಳಿದ ದುಷ್ಕರ್ಮಿಗಳ ಪತ್ತೆಗೆ ಬಲೆ

ಬೆಂಗಳೂರು : ಸಿಸಿಬಿ ಪೊಲೀಸರು ಮತ್ತೊಮ್ಮೆ ತಮ್ಮ ಕಾರ್ಯದಕ್ಷತೆಯನ್ನು ಪ್ರದರ್ಶಿಸಿದ್ದಾರೆ. ಅಪಹರಣವಾದ 24ಗಂಟೆಗಳಲ್ಲಿಯೇ ಆರೋಪಿಯನ್ನು ಬಂಧಿಸಿ, ಅಪಹೃತ ಯುವತಿಯನ್ನು ಪಾರುಮಾಡಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಚನ್ನಪಟ್ಟಣದ ಎಲೆಕ್ಟ್ರಿಕಲ್‌ ಕಂಟ್ರಾಕ್ಟರ್‌ ಕೇಸರ್‌ ಚಂದ್‌ ಅವರ ಪುತ್ರಿ ಮನಿಷಾ (16)ಳನ್ನು, ಮಾರುತಿ ಕಾರಿನಲ್ಲಿ ದುಷ್ಕರ್ಮಿಗಳು ಬುಧವಾರ ಅಪಹರಿಸಿದ್ದರು. ಒತ್ತೆ ಹಣ 5ಲಕ್ಷ ರೂ. ನೀಡದಿದ್ದರೆ, ಪ್ರಾಣ ತೆಗೆಯುವುದಾಗಿ ಬೆದರಿಕೆವೊಡ್ಡಿದ್ದರು.

ದುಷ್ಕರ್ಮಿಗಳ ಪತ್ತೆಗೆ ಚನ್ನಪಟ್ಟಣ ಪೊಲೀಸರೊಂದಿಗೆ ಕೈಜೋಡಿಸಿದ ಸಿಸಿಬಿ ಪೊಲೀಸರು ಪ್ರಕರಣವನ್ನು ಭೇದಿಸಿದ್ದಾರೆ. ಕೇಸರ್‌ ಚಂದ್‌ರಿಂದ ಹಣ ಪಡೆಯಲು ಮೈಸೂರು ರಸ್ತೆಗೆ ಬಂದಿದ್ದ ದುಷ್ಕರ್ಮಿಗಳಲ್ಲಿ ಒಬ್ಬ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಉಳಿದ ಐದು ಮಂದಿ ದುಷ್ಕರ್ಮಿಗಳು ಅಪಹೃತ ಯುವತಿಯನ್ನು ಕೆಂಪೇಗೌಡ ರಸ್ತೆಯ ಮೈಸೂರು ಬ್ಯಾಂಕ್‌ ಬಳಿಬಿಟ್ಟು ಪರಾರಿಯಾಗಿದ್ದಾರೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X