ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಬಂ’ ಬೆಂಬಲಿಗ ಶಾಸಕದ್ವಯರ ವಿರುದ್ಧ ಬಿಜೆಪಿ ದೂರು

By Staff
|
Google Oneindia Kannada News

‘ಬಂ’ ಬೆಂಬಲಿಗ ಶಾಸಕದ್ವಯರ ವಿರುದ್ಧ ಬಿಜೆಪಿ ದೂರು
ಗೋಪಾಲಕೃಷ್ಣ, ಹರತಾಳು ಹಾಲಪ್ಪ ಅವರ ಸದಸ್ಯತ್ವ ಅನರ್ಹಗೊಳಿಸಲು ಬಿಜೆಪಿ ಅರ್ಜಿ

ಬೆಂಗಳೂರು : ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವ ಇಬ್ಬರು ಬಿಜೆಪಿ ಶಾಸಕರ ಸದಸ್ಯತ್ವವನ್ನು ಅನರ್ಹಗೊಳಿಸುವಂತೆ ಕೋರಿ ರಾಜ್ಯ ಬಿಜೆಪಿ ಘಟಕ ಗುರುವಾರ ಅರ್ಜಿ ಸಲ್ಲಿಸಿದೆ.

ವಿಧಾನಸಭಾ ಸ್ಪೀಕರ್‌ ಕೃಷ್ಣ ಅವರಿಗೆ ಅರ್ಜಿಸಲ್ಲಿಸಿರುವ ಬಿಜೆಪಿ, ಶಾಸಕರಾದ ಬೇಳೂರು ಗೋಪಾಲಕೃಷ್ಣ ಮತ್ತು ಹರತಾಳು ಹಾಲಪ್ಪ ವಿರುದ್ಧ ಆರೋಪ ಮಾಡಿದೆ.

ಪಕ್ಷದಲ್ಲಿದ್ದುಕೊಂಡೇ ಈ ಇಬ್ಬರು ಶಾಸಕರು ಬಂಗಾರಪ್ಪ ನೇತೃತ್ವದ ಸಮಾಜವಾದಿ ಪಕ್ಷದ ಜೊತೆ ಗುರ್ತಿಸಿಕೊಂಡಿದ್ದಾರೆ. ಪಕ್ಷಾಂತರ ವಿರೋಧಿ ಕಾನೂನಿನನ್ವಯ ಸೂಕ್ತ ಕ್ರಮಜರುಗಿಸಲು, ವಿಶ್ವೇಶ್ವರ ಹೆಗಡೆ ಕಾಗೇರಿ ನೇತೃತ್ವದಲ್ಲಿ ರಾಜ್ಯ ಬಿಜೆಪಿ ಅರ್ಜಿ ಸಲ್ಲಿಸಿದೆ.

ಬೇಳೂರು ಗೋಪಾಲಕೃಷ್ಣ ಮತ್ತು ಹರತಾಳು ಹಾಲಪ್ಪ ಅವರು ಕ್ರಮವಾಗಿ ಸಾಗರ ಹಾಗೂ ಹೊಸನಗರದ ಶಾಸಕರಾಗಿದ್ದಾರೆ.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X