ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ದೇವರಾಜು ವಿರುದ್ಧ ದೇವೇಗೌಡರ ಗಂಭೀರ ದೂರು
ದೇವರಾಜು
ವಿರುದ್ಧ
ದೇವೇಗೌಡರ
ಗಂಭೀರ
ದೂರು
ಚಾಮರಾಜಪೇಟೆ
ಕ್ಷೇತ್ರದಲ್ಲಿ
ಭಯದ
ವಾತಾವರಣವಿದೆ
-ಹೆಚ್.ಡಿ.ದೇವೇಗೌಡ
ಚಾಮರಾಜಪೇಟೆ ಉಪಚುನಾವಣೆಯಲ್ಲಿ ಅವ್ಯವಹಾರವೆಸಗಲು ಸಮಾಜಘಾತುಕ ಶಕ್ತಿಗಳು ಮತ್ತು ಆಡಳಿತ ಯಂತ್ರವನ್ನು ಕಾಂಗ್ರೆಸ್ ಅಭ್ಯರ್ಥಿ ಆರ್.ವಿ.ದೇವರಾಜು ಬಳಸಿಕೊಳ್ಳುತ್ತಿದ್ದಾರೆಂದು ಕೇಂದ್ರ ಚುನಾವಣಾ ಆಯೋಗಕ್ಕೆ ಅವರು ಪತ್ರ ಬರೆದಿದ್ದಾರೆ.
ಈ ಹಿಂದೆ ನಡೆದ ಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಚುನಾವಣಾ ಅಕ್ರಮಗಳಲ್ಲಿ ಭಾಗಿಯಾಗಿದ್ದರು. ಈ ಚುನಾವಣೆಗಾಗಿ ಈಗಾಗಲೇ ಅವರು ನಕಲಿ ದಾಖಲೆಗಳನ್ನು ಸೃಷ್ಟಿಸುತ್ತಿದ್ದಾರೆ. ಪೋಲಿಸರ ಪಟ್ಟಿಯಲ್ಲಿರುವ ಅನೇಕರು ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸುತ್ತಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯ ಕುಮ್ಮಕ್ಕಿನಿಂದಲೇ ರೌಡಿ ಪಟ್ಟಿಯಲ್ಲಿರುವ ಇನ್ನೂ ಐವರು ಅಭ್ಯರ್ಥಿಗಳ ಕಣದಲ್ಲಿದ್ದಾರೆ. ಕ್ಷೇತ್ರದಲ್ಲಿ ಭಯದ ವಾತಾವರಣವಿದೆ ಎಂದು ದೇವೇಗೌಡ ಆತಂಕ ವ್ಯಕ್ತಪಡಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
Comments
Story first published: Wednesday, May 25, 2005, 23:53 [IST]