ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಜಾಪ್ರಭುತ್ವದ ಕಗ್ಗೊಲೆ : ಬಿಹಾರ್‌ ಬಂದ್‌ ಶುರು

By Staff
|
Google Oneindia Kannada News

ಪ್ರಜಾಪ್ರಭುತ್ವದ ಕಗ್ಗೊಲೆ : ಬಿಹಾರ್‌ ಬಂದ್‌ ಶುರು
ನಿತೀಶ್‌ ಕುಮಾರ್‌ ಮುಖ್ಯಮಂತ್ರಿಯಾಗುವುದನ್ನು ತಡೆಯಲು ಕೇಂದ್ರದ ಹುನ್ನಾರ : ಎನ್‌ಡಿಎ ಆರೋಪ

ನವದೆಹಲಿ : ಬಿಹಾರ ವಿಧಾನಸಭೆಯನ್ನು ವಿಸರ್ಜನೆ ಮಾಡಿದ್ದನ್ನು ವಿರೋಧಿಸಿ, ಎನ್‌ಡಿಎ ಕರೆ ನೀಡಿದ್ದ ಬಂದ್‌ ಮಂಗಳವಾರ ಆರಂಭಗೊಂಡಿದೆ.

ವಿಧಾನ ಸಭೆಯನ್ನು ವಿಸರ್ಜಿಸಿ, ಚುನಾವಣೆ ನಡೆಸುವ ಕೇಂದ್ರದ ಕ್ರಮವನ್ನು ಎನ್‌ಡಿಎ ತರಾಟೆಗೆ ತೆಗೆದುಕೊಂಡಿದೆ. ಇದಕ್ಕೆ ಕೇಂದ್ರಗೃಹ ಸಚಿವ ಶಿವರಾಜ್‌ ಪಾಟೀಲ್‌ ಮತ್ತು ರಾಜ್ಯಪಾಲ ಬೂಟಾಸಿಂಗ್‌ ಅವರೇ ಕಾರಣ ಎಂದು ಅದು ಆರೋಪಿಸಿದೆ.

ಸಂಯುಕ್ತ ದಳದ ನಿತೀಶ್‌ಕುಮಾರ್‌ ಅವರನ್ನು ಮುಖ್ಯ ಮಂತ್ರಿಯಾಗದಂತೆ ತಡೆಯಲು ಹುನ್ನಾರ ನಡೆಸಲಾಗಿದೆ. ಆರ್‌ಜೆಡಿಯ ಲಾಲೂ ಪ್ರಸಾದ್‌ ಯಾದವ್‌ ಮತ್ತು ಎಲ್‌ಜೆಪಿಯ ರಾಮ್‌ವಿಲಾಸ್‌ ಪಾಸ್ವಾನ್‌ ಅವರ ಒತ್ತಡಕ್ಕೆ ಮಣಿದು ಪ್ರಜಾಪ್ರಭುತ್ವದ ಕತ್ತು ಹಿಸುಕಲಾಗಿದೆ. ಕೂಡಲೇ ರಾಜ್ಯಪಾಲರನ್ನು ವಾಪಸು ಕರೆಸಿಕೊಳ್ಳುವಂತೆ ಎನ್‌ಡಿಎ ಆಗ್ರಹಿಸಿದೆ.

ಹೋರಾಟ ನಿಲ್ಲದು : ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ನಾರಾಯಣಸಿಂಗ್‌, ಒಟ್ಟು 90 ಎನ್‌ಡಿಎ ಶಾಸಕರು, 17ಪಕ್ಷೇತರ ಶಾಸಕರು ಮತ್ತು 21 ಎಲ್‌ಜೆಪಿ ಶಾಸಕರು ನಿತೀಶ್‌ಕುಮಾರ್‌ ನಾಯಕತ್ವದ ಸರ್ಕಾರಕ್ಕೆ ಬೆಂಬಲ ನೀಡಲು ಸಿದ್ಧರಿದ್ದರು. ಅಧಿಕಾರವನ್ನು ತಪ್ಪಿಸಲು ನಡೆಸಲಾಗಿರುವ ಈ ಸಂಚನ್ನು ದೇಶದ ಮುಂದಿಡುವುದಾಗಿ ತಿಳಿಸಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X