ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಜಯನಗರ ರಸ್ತೆಯಲ್ಲಿ ಈಗ ಸುಗಮ ಸಂಚಾರ

By Staff
|
Google Oneindia Kannada News

ವಿಜಯನಗರ ರಸ್ತೆಯಲ್ಲಿ ಈಗ ಸುಗಮ ಸಂಚಾರ
ಹೈಕೋರ್ಟ್‌ ಆದೇಶದನ್ವಯ ಪಾಲಿಕೆಯಿಂದ ಅಕ್ರಮ ಅಂಗಡಿಗಳ ತೆರವು

ಬೆಂಗಳೂರು : ಮಹಾನಗರ ಪಾಲಿಕೆ ಹಾಗೂ ಬೆಂಗಳೂರು ಮೆಟ್ರೋಪಾಲಿಟನ್‌ ಟಾಸ್ಕ್‌ ಫೋರ್ಸ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಅನಧಿಕೃತ 130 ಅಂಗಡಿ ಮಳಿಗೆಗಳನ್ನು ತೆರವುಗೊಳಿಸಿವೆ.

ವಿಜಯನಗರ ಬಸ್‌ ನಿಲ್ದಾನದ ಬಳಿಯ ವೆಸ್ಟ್‌ ಆಫ್‌ ಕಾರ್ಡ್‌ ರಸ್ತೆ ಮತ್ತು ಸರ್ವೀಸ್‌ ರಸ್ತೆಗಳ ಬದಿಯಲ್ಲಿ ಅನಧಿಕೃತವಾಗಿ ಬೇರೂರಿದ್ದ 130 ಹಣ್ಣು, ಹೂವು ಮತ್ತು ತರಕಾರಿ ಅಂಗಡಿಗಳನ್ನು ಭಾನುವಾರ ನಡೆದ ಕಾರ್ಯಾಚರಣೆಯಲ್ಲಿ, ಪ್ರತಿರೋಧದ ನಡುವೆಯೂ ತೆರವುಗೊಳಿಸಲಾಗಿದೆ.

ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಹಿನ್ನೆಲೆಯಲ್ಲಿ ರಸ್ತೆ ಸಂಚಾರಕ್ಕೆ ಅಡ್ಡಿಯಾಗುವ ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸಲು ರಾಜ್ಯ ಉಚ್ಚನ್ಯಾಯಾಲಯ ಆದೇಶ ನೀಡಿದ ಬೆನ್ನಲ್ಲಿ ಕಾರ್ಯಾಚರಣೆ ಆರಂಭಗೊಂಡಿದೆ.

ಮಹಾನಗರ ಪಾಲಿಕೆಯ ಹೆಚ್ಚುವರಿ ಆಯುಕ್ತ ಪಿ.ಕೆ. ಶ್ರೀಹರಿ, ದಕ್ಷಿಣ ವಲಯದ ಉಪ ಆಯುಕ್ತ ಡಾ. ಚಂದ್ರಶೇಖರ್‌ ಕಾರ್ಯಾಚರಣೆಯ ನೇತೃತ್ವವಹಿಸಿದ್ದರು.
(ಇನ್ಫೋ ವಾರ್ತೆ)

ಮುಖಪುಟ / ಬೆಂಗಳೂರು ಡೈರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X