ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಸಿಇಟಿ ಸೀಟು ಹಂಚಿಕೆಗೆ ಮತ್ತೆರಡು ಕೇಂದ್ರಗಳ ಸ್ಥಾಪನೆ
ಸಿಇಟಿ
ಸೀಟು
ಹಂಚಿಕೆಗೆ
ಮತ್ತೆರಡು
ಕೇಂದ್ರಗಳ
ಸ್ಥಾಪನೆ
ಡಾ.ಶಕುಂತಲಾ
ಕತ್ರೆ
ಮತ್ತು
ಪ್ರೊ.ಕೆ.ಬಸವರಾಜ್
ಸಿಇಟಿ
ಹಂಚಿಕೆ
ಕೇಂದ್ರ
ಸಮಿತಿಯ
ಸದಸ್ಯರು.
ರಾಜ್ಯ ಸರ್ಕಾರ ಕನಿಷ್ಠ ಪಕ್ಷ 2 ಕೇಂದ್ರಗಳನ್ನು ತೆರೆಯುವ ಉದ್ದೇಶ ಹೊಂದಿದೆ. ಸಾಧ್ಯವಾದರೆ ನಾಲ್ಕು ಕೇಂದ್ರಗಳನ್ನು ಮಾಡಲಾಗುವುದು. ಮುಂದಿನ ವರ್ಷದಿಂದ ಈ ಕೇಂದ್ರಗಳು ಕಾರ್ಯನಿರ್ವಹಿಸಲಿವೆ. ಈ ಕುರಿತು ಇಬ್ಬರು ಸದಸ್ಯರಿರುವ ಒಂದು ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ವಿಜ್ಞಾನ ವಿಭಾಗದ ಡೀನ್ ಡಾ.ಶಕುಂತಲಾ ಕತ್ರೆ ಮತ್ತು ತಾಂತ್ರಿಕ ಶಿಕ್ಷಣ ನಿರ್ದೇಶಕ ಪ್ರೊ.ಕೆ.ಬಸವರಾಜ್ ಅವರು ಸದಸ್ಯರಾಗಿರುತ್ತಾರೆ.
ವಿದ್ಯಾರ್ಥಿಗಳು ಸಿಇಟಿ ಸಂಬಂಧ ವರ್ಷಕ್ಕೆ ಎರಡು, ಮೂರು ಸುತ್ತು ಬೆಂಗಳೂರಿಗೆ ಬಂದು ಹೋಗಬೇಕಿತ್ತು. ಸಿಇಟಿ ವ್ಯವಸ್ಥೆ ಆರಂಭವಾದಾಗಿನಿಂದಲೂ ಈ ಪ್ರಕ್ರಿಯೆ ಬೆಂಗಳೂರಿನಲ್ಲಿಯೇ ನಡೆದುಕೊಂಡು ಬಂದಿದೆ. ಆದರೆ ಇನ್ನು ಮುಂದೆ ದೂರದ ಊರಿನ ವಿದ್ಯಾರ್ಥಿಗಳು ಬೆಂಗಳೂರಿಗೆ ಬರುವ ತೊಂದರೆ ತಪ್ಪಲಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
Story first published: Sunday, May 22, 2005, 23:53 [IST]