ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಕೀರಾ ಹತ್ಯೆ : ಸ್ವಾಮಿ ಶ್ರದ್ಧಾನಂದ್‌ ಕೊರಳಿಗೆ ಉರುಲು

By Staff
|
Google Oneindia Kannada News

ಶಕೀರಾ ಹತ್ಯೆ : ಸ್ವಾಮಿ ಶ್ರದ್ಧಾನಂದ್‌ ಕೊರಳಿಗೆ ಉರುಲು
ದಿವಾನ್‌ ಮಿರ್ಜಾ ಇಸ್ಮಾಯಿಲ್‌ ಮೊಮ್ಮಗಳ ಕೊಲೆ ಪ್ರಕರಣಕ್ಕೆ ತೆರೆ

ಬೆಂಗಳೂರು : ರಾಜ್ಯದ ಜನತೆಯಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಶಕೀರಾ ಖಲೀಲ್‌ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ನ್ಯಾಯಾಲಯ ಶನಿವಾರ ಮರಣದಂಡನೆಯನ್ನು ವಿಧಿಸಿದೆ.

ನಗರದ ಸಿವಿಲ್‌ ಮತ್ತು ಸೆಷನ್‌ ನ್ಯಾಯಾಲಯದ ನ್ಯಾಯಾಧೀಶ ಬಿ.ಎಸ್‌.ತೋಟದ ಅವರು, ಅರೋಪಿಗೆ ಮರಣದಂಡನೆಯನ್ನು ವಿಧಿಸುವ ಮೂಲಕ ಹದಿನಾಲ್ಕು ವರ್ಷಗಳಷ್ಟು ಹಳೆಯದಾದ ಪ್ರಕರಣಕ್ಕೆ ತೆರೆ ಎಳೆದಿದ್ದಾರೆ.

ಹಿನ್ನೆಲೆ : ಮೈಸೂರು ಸಂಸ್ಥಾನದಲ್ಲಿ ಹಿಂದೆ ದಿವಾನರಾಗಿದ್ದ ಸರ್‌ಮಿರ್ಜಾ ಇಸ್ಮಾಯಿಲ್‌ ಅವರ ಮೊಮ್ಮಗಳಾದ ಶಕೀರಾ ಅವರನ್ನು ಸ್ವಯಂ ಘೋಷಿತ ದೇವಮಾನವ ಸ್ವಾಮಿ ಶ್ರದ್ಧಾನಂದ ಅವರು ಎರಡನೇ ಮದುವೆಯಾಗಿದ್ದರು.

ಶಕೀರಾ ಅವರನ್ನು ಕೊಲೆಗೈದ ಆರೋಪಕ್ಕೆ ಶ್ರದ್ಧಾನಂದ ಸಿಲುಕಿದ್ದರು. ವಿಚಾರಣೆ ಆಲಿಸಿದ ನ್ಯಾಯಾಧೀಶರು, ಆರೋಪಿಗೆ ಶಿಕ್ಷೆಯ ಪ್ರಮಾಣ ನಿಗದಿಗೊಳಿಸುವ ಅಂತಿಮ ತೀರ್ಪನ್ನು ಶುಕ್ರವಾರದಿಂದ ಶನಿವಾರಕ್ಕೆ ಮುಂದೂಡಿದ್ದರು.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X