ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉದ್ಯಾನ ನಗರದಿ ಕ್ರೆೃಂ ಪ್ರಕರಣಗಳ ಸಂಖ್ಯೆ ಕುಸಿತ

By Staff
|
Google Oneindia Kannada News

ಉದ್ಯಾನ ನಗರದಿ ಕ್ರೆೃಂ ಪ್ರಕರಣಗಳ ಸಂಖ್ಯೆ ಕುಸಿತ
ಅಪರಾಧ ಪ್ರಕರಣಗಳನ್ನು ವೈಭವೀಕರಿಸಿ, ಜನರಲ್ಲಿ ಮಾದ್ಯಮಗಳು ಭಯಹುಟ್ಟಿಸುತ್ತಿವೆ - ಎಸ್‌.ಮರಿಸ್ವಾಮಿ

ಬೆಂಗಳೂರು : ಕಳೆದ ಹತ್ತು ವರ್ಷಗಳಿಗೆ ಹೋಲಿಸಿದರೆ ರಾಜಧಾನಿ ನಗರದಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆಗಣನೀಯವಾಗಿ ಕಡಿಮೆಯಾಗಿದೆ ಎಂದು ನಗರ ಪೊಲೀಸ್‌ ಆಯುಕ್ತ ಎಸ್‌. ಮರಿಸ್ವಾಮಿ ಹೇಳಿದ್ದಾರೆ.

ನಗರದಲ್ಲಿ ಪಬ್ಲಿಕ್‌ ರಿಲೇಷನ್ಸ್‌ ಕೌನ್ಸಿಲ್‌ ಆಫ್‌ ಇಂಡಿಯಾ (ಪಿಆರ್‌ಸಿಐ) ಏರ್ಪಡಿಸಿದ್ದ ವಿಶ್ವ ಸಂವಹನಕಾರರ ದಿನಾಚರಣೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಟೀವಿ ಮಾದ್ಯಮಗಳು ಅಪರಾಧ ಪ್ರಕರಣಗಳನ್ನು ಅತಿಯಾಗಿ ವೈಭವೀಕರಿಸಿ ಸಾರ್ವಜನಿಕರಲ್ಲಿ ತಪ್ಪು ಭಾವನೆಯನ್ನು ಮೂಡಿಸುತ್ತಿವೆ ಎಂದರು.

ಸರ ಅಪಹರಣ ಹಾಗೂ ದರೋಡೆಯಂತಹ ಪ್ರಕರಣಗಳನ್ನು ಹೊರತುಪಡಿಸಿದರೆ, ದೊಡ್ಡ ಪ್ರಮಾಣದ ಕೃತ್ಯಗಳು ನಗರದಲ್ಲಿ ಇಳಿಮುಖಗೊಂಡಿವೆ ಎಂದು ಮರಿಸ್ವಾಮಿ ತಿಳಿಸಿದರು.

ಪಿಆರ್‌ಸಿಐನ ಮುಖ್ಯಸ್ಥ ಎಂ.ಬಿ. ಜಯರಾಂ, ರಾಜ್ಯ ಮಾದ್ಯಮ ಅಕಾಡೆಮಿ ಅಧ್ಯಕ್ಷ ವಿ. ಎನ್‌. ಸುಬ್ಬರಾವ್‌, ಪ್ರಭಾತ್‌ ಪಾಣಿ, ಡಾ. ಕೆ.ಆರ್‌. ಸಿಂಗ್‌ ಮತ್ತಿತರರು ಸಮಾರಂಭದಲ್ಲಿ ಹಾಜರಿದ್ದರು.
(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X