ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಪಲಾಯನವಾದಿ ಬಂಗಾರಪ್ಪ ಅವರಿಗೆ ತಕ್ಕ ಪಾಠ’

By Staff
|
Google Oneindia Kannada News

‘ಪಲಾಯನವಾದಿ ಬಂಗಾರಪ್ಪ ಅವರಿಗೆ ತಕ್ಕ ಪಾಠ’
ಬಂಗಾರಪ್ಪ ಬಿಜೆಪಿ ಜೊತೆ ಚರ್ಚೆಗೆ ಬರಲಿ : ಅನಂತಕುಮಾರ್‌ ಸವಾಲು

ಶಿವಮೊಗ್ಗ : ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಬಿಜೆಪಿಯಿಂದ ಎಲ್ಲವನ್ನೂ ಪಡೆದು, ಕಡೆಗೆ ಪಕ್ಷಕ್ಕೆ ದ್ರೋಹವೆಸಗಿದರು. ಸಲ್ಲದ ಆರೋಪಗಳನ್ನು ಮಾಡುವ ಅವರು ನಮ್ಮೊಂದಿಗೆ ಚರ್ಚೆಗೆ ಬರಲಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್‌ ಸವಾಲು ಹಾಕಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂರು ದಶಕಗಳಿಂದ ಅಧಿಕಾರದ ಲಾಲಸೆಗಾಗಿ ಆರು ಬಾರಿ ಇತರ ಪಕ್ಷಗಳಿಗೆ ಬಂಗಾರಪ್ಪ ಹೋಗಿದ್ದಾರೆ ಎಂದರು.

ತತ್ವಕ್ಕಿಂತಲೂ ಅಧಿಕಾರವೇ ಮುಖ್ಯ ಎಂದು ಭಾವಿಸಿರುವ ಬಂಗಾರಪ್ಪ ಅವರಿಗೆ ಶಿವಮೊಗ್ಗ ಮತದಾರರು ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ. ಬಂಗಾರಪ್ಪ ಎಂಬ ಪಲಾಯನವಾದಿಯನ್ನು ಪಕ್ಷಕ್ಕೆ ಕರೆತಂದದ್ದಕ್ಕೆ ಯಡಿಯೂರಪ್ಪ ಕ್ಷಮೆಯಾಚಿಸಿದ್ದಾರೆ. ಅವರು ಕ್ಷಮೆ ಯಾಚಿಸಿದರೆ ಪಕ್ಷವು ಕ್ಷಮೆ ಯಾಚಿಸಿದಂತೆ ಎಂದು ಅನಂತ ಕುಮಾರ್‌ ಹೇಳಿದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X