ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಂಧ್ರ ವಿರುದ್ಧ ಕೃಷ್ಣಾ ಜಲ ನ್ಯಾಯಮಂಡಳಿಗೆ ಅರ್ಜಿ

By Staff
|
Google Oneindia Kannada News

ಆಂಧ್ರ ವಿರುದ್ಧ ಕೃಷ್ಣಾ ಜಲ ನ್ಯಾಯಮಂಡಳಿಗೆ ಅರ್ಜಿ
ರಾಜ್ಯದ ಹಿತಕಾಯಲು ಎಫ್‌.ಎಸ್‌.ನಾರಿಮನ್‌ ಸಾರಥ್ಯ

ಬೆಂಗಳೂರು : ಕೃಷ್ಣಾ ನದಿ ಕಣಿವೆಯಲ್ಲಿ ಆಂಧ್ರಪ್ರದೇಶವು ಕೈಗೊಂಡಿರುವ ಅಕ್ರಮ ನೀರಾವರಿ ಯೋಜನೆಗಳನ್ನು ತಡೆಯುವಂತೆ ಕೋರಿ, ರಾಜ್ಯ ಸರ್ಕಾರವು ಕೃಷ್ಣಾ ಜಲ ನ್ಯಾಯಮಂಡಳಿಗೆ ಗುರುವಾರ ಅರ್ಜಿ ಸಲ್ಲಿಸಿದೆ.

ರಾಜ್ಯದ ಪರ ವಕೀಲ ಎಫ್‌.ಎಸ್‌.ನಾರಿಮನ್‌, ಆಂಧ್ರಪ್ರದೇಶ ಸರ್ಕಾರವು ತೆಲುಗು ಗಂಗಾ ಹಾಗೂ ಮತ್ತಿತರ ಯೋಜನೆಯಲ್ಲಿ ತಕ್ಷಣವೇ ಕೈಬಿಡಬೇಕು. ಇಲ್ಲವಾದರೆ ಕರ್ನಾಟಕದ ಹಿತಾಸಕ್ತಿಗೆ ಧಕ್ಕೆಯಾಗುತ್ತದೆ ಎಂದು ನ್ಯಾಯಮಂಡಳಿಗೆ ಸಲ್ಲಿಸಿರುವ ಅರ್ಜಿಯಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಕಾನೂನು ಸಚಿವ ಎಚ್‌.ಕೆ.ಪಾಟೀಲ್‌, ತೆಲುಗು ಗಂಗಾ, ಶ್ರೀಶೈಲಂ ಎಡದಂಡೆ ಮತ್ತು ಬಲದಂಡೆ ಕಾಲುವೆ, ಭೀಮಾ ಮತ್ತು ಕೊಯ್ಲುಸಾಗರ ಏತ ನೀರಾವರಿ, ನೆಟ್ಟಂಪಾಡ್‌, ಪುಲಿಚಿಂತಲ, ವೆಲಿಗೊಂಡ, ಆಂದ್ರಿನಿವಾ, ಕಲ್ವಕುರ್ತಿ, ಗಲೇರುನಗರಿ ಏತ ನೀರಾವರಿ ಯೋಜನೆಗಳ ವಿರುದ್ಧ ರಾಜ್ಯ ಸರ್ಕಾರ ಆಕ್ಷೇಪಣೆ ವ್ಯಕ್ತಪಡಿಸಿದೆ ಎಂದರು.

ರಾಜ್ಯದ ಪರ ಕಾನೂನು ಸಲಹೆಗಾರರ ಪಟ್ಟಿಯನ್ನು ಬುಧವಾರ ನ್ಯಾಯಮಂಡಳಿಗೆ ಸಲ್ಲಿಸಲಾಗಿದೆ. ನಾರಿಮನ್‌ ಅವರೊಂದಿಗೆ ಖ್ಯಾತ ನ್ಯಾಯವಾದಿಗಳಾದ ಮೋಹನ್‌ ಕಾತರಕಿ, ಪಪ್ಪು, ಜವಳಿ ಮತ್ತು ಸುಭಾಸ್‌ ಶರ್ಮಾ ಪ್ರಕರಣದಲ್ಲಿ ರಾಜ್ಯದ ಪರ ವಾದ ಮಂಡಿಸಲಿದ್ದಾರೆಂದು ಎಚ್‌.ಕೆ. ಪಾಟೀಲ್‌ ಹೇಳಿದರು.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X