ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾರಾಯಣ ಹೃದಯಾಲಯದಿಂದ ಮಕ್ಕಳ ಆಸ್ಪತ್ರೆ

By Staff
|
Google Oneindia Kannada News

ನಾರಾಯಣ ಹೃದಯಾಲಯದಿಂದ ಮಕ್ಕಳ ಆಸ್ಪತ್ರೆ
ಬಡ ಮಕ್ಕಳಿಗೆ ನೂತನ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ -ಡಾ.ದೇವಿಶೆಟ್ಟಿ ಭರವಸೆ

ಬೆಂಗಳೂರು : ನಗರದ ನಾರಾಯಣ ಹೃದಯಾಲಯದಲ್ಲಿ ವಿಪ್ರೋ ಸಂಸ್ಥೆಯ ಮುಖ್ಯಸ್ಥ ಅಜೀಂ ಪ್ರೇಮ್‌ಜಿ ನೂತನ ಮಕ್ಕಳ ಆಸ್ಪತ್ರೆಯನ್ನು ಉದ್ಘಾಟಿಸಿ, ಯಶಸ್ಸು ಕೋರಿದರು.

ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಆಸ್ಪತ್ರೆಯ ಮುಖ್ಯಸ್ಥ ಡಾ.ದೇವಿಶೆಟ್ಟಿ ಮಾತನಾಡಿ, ಹೃದ್ರೋಗ ಮತ್ತಿತರ ಭೀಕರ ಕಾಯಿಲೆಗಳಿಂದ ಮಕ್ಕಳು ಮತ್ತು ಪೋಷಕರು ಇನ್ನು ಮುಂದೆ ಆತಂಕಗೊಳ್ಳ ಬೇಕಾಗಿಲ್ಲ. ಈ ಪರಿಸ್ಥಿತಿಯನ್ನು ತಪ್ಪಿಸಲು ನಾರಾಯಣ ಮಕ್ಕಳ ಆಸ್ಪತ್ರೆಯನ್ನು ಆರಂಭಿಸಲಾಗಿದೆ ಎಂದರು.

ನಾರಾಯಣ ಹೃದಯಾಲಯದಲ್ಲಿ ಲಭ್ಯವಿರುವ ಎಲ್ಲಾ ಸೌಲಭ್ಯಗಳನ್ನು ಈ ಮಕ್ಕಳ ಆಸ್ಪತ್ರೆ ಒಳಗೊಂಡಿದೆ. ಅದರ ನೇತೃತ್ವವನ್ನು ಡಾ.ಆಶ್ಲೇ ಡಿ ಕ್ರೂಜ್‌ ಅವರಿಗೆ ವಹಿಸಲಾಗಿದೆ. 500ಹಾಸಿಗೆಗಳ ಈ ಆಸ್ಪತ್ರೆಯನ್ನು ಮುಂದಿನ ಮೂರುವರ್ಷಗಳಲ್ಲಿ 5000ಹಾಸಿಗೆಯ ಸುಸಜ್ಜಿತ ಆಸ್ಪತ್ರೆಯನ್ನಾಗಿ ಪರಿವರ್ತಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.

ಮಾರಕ ರೋಗಗಳಿಗೆ ಗುರಿಯಾದ ಬಡ ಮಕ್ಕಳಿಗೆ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ನೀಡುವುದಾಗಿ ಡಾ. ದೇವಿಶೆಟ್ಟಿ ತಿಳಿಸಿದರು.

(ಇನ್ಫೋ ವಾರ್ತೆ)

ಮುಖಪುಟ / ಬೆಂಗಳೂರು ಡೈರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X