ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾವಗೀತೆಗಳ ಕವಿ ವ್ಯಾಸರಾವ್‌ಗೆ ‘ಸ್ವರಮಂದಾರ’

By Staff
|
Google Oneindia Kannada News

ಭಾವಗೀತೆಗಳ ಕವಿ ವ್ಯಾಸರಾವ್‌ಗೆ ‘ಸ್ವರಮಂದಾರ’
ಪುತ್ತೂರು ನರಸಿಂಹನಾಯಕ್‌, ಶ್ಯಾಮಲ ಜಾಗಿರ್‌ದಾರ್‌ಗೆ ಹೊಂಬಾಳೆ ಪ್ರಶಸ್ತಿ

ಬೆಂಗಳೂರು : 2004ನೇ ಸಾಲಿನ ಹೊಂಬಾಳೆ ಸಂಸ್ಥೆಯ ಪ್ರತಿಷ್ಠಿತ ‘ ಸ್ವರ ಮಂದಾರ’ ಪ್ರಶಸ್ತಿಗೆ ಭಾವಗೀತೆಗಳ ಪ್ರಪಂಚದ ವಿಸ್ಮಯ ಕವಿ ಎಂ.ಎನ್‌.ವ್ಯಾಸರಾವ್‌ ಆಯ್ಕೆಗೊಂಡಿದ್ದಾರೆ.

ಸ್ವರ ಮಂದಾರ ಪ್ರಶಸ್ತಿಯನ್ನು ಹೊಂಬಾಳೆ ಸಾಂಸ್ಕೃತಿಕ ಸಂಘಟನೆಯು ಐದು ವಿಭಾಗಗಳಲ್ಲಿ ಪ್ರತಿವರ್ಷ ವಿತರಿಸುತ್ತಿದೆ. ಗೀತ ರಚನೆಗಾರ ಪ್ರಶಸ್ತಿಗೆ ಎಂ.ಎನ್‌.ವ್ಯಾಸರಾವ್‌ ಪಾತ್ರರಾಗಿದ್ದಾರೆ.

ಸ್ವರ ಸಂಯೋಜಕ ಪ್ರಶಸ್ತಿಗೆ ಎನ್‌. ಎಸ್‌.ಪ್ರಸಾದ್‌, ಶ್ರೇಷ್ಠ ಗಾಯಕಿ ಪ್ರಶಸ್ತಿಗೆ ಶ್ಯಾಮಲ ಜಾಗಿರ್‌ದಾರ್‌, ಶ್ರೇಷ್ಠ ಗಾಯಕ ಪ್ರಶಸ್ತಿಗೆ ಪುತ್ತೂರು ನರಸಿಂಹನಾಯಕ್‌, ಉದಯೋನ್ಮುಖ ಪ್ರಶಸ್ತಿಗೆ ಮಾ.ಯೋಗೀಂದ್ರರಕ್ಷಿತ್‌, ವಾದ್ಯಗಾರರಿಗೆ ನೀಡುವ ಕಲಾಕೋವಿದ ಪ್ರಶಸ್ತಿಗೆ ಬಿ.ವಿ.ರಾಧಾಕೃಷ್ಣ , ಅನನ್ಯ ಕಲಾಭಿಜ್ಞ ಪ್ರಶಸ್ತಿಗೆ ಬಿ.ಎಂ.ಸೀತಾರಾಂ ಅವರನ್ನು ಆಯ್ಕೆ ಮಾಡಲಾಗಿದೆ.

ವರ್ಷದ ಧ್ವನಿ ಸುರುಳಿ ಪ್ರಶಸ್ತಿಗೆ ಲಹರಿ ಸಂಸ್ಥೆಯನ್ನು ಆಯ್ಕೆ ಮಾಡಲಾಗಿದ್ದು, ಪ್ರಶಸ್ತಿ ವಿತರಣಾ ಸಮಾರಂಭದ ವಿವರಗಳನ್ನು ಸದ್ಯದಲ್ಲಿಯೇ ಪ್ರಕಟಿಸುವುದಾಗಿ ಹೊಂಬಾಳೆ ತಿಳಿಸಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X