ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಾಯಕ ಆರ್‌.ಕೆ.ಶ್ರೀಕಂಠನ್‌ಗೆ ಸ್ವಾಮಿರಾವ್‌ ಪ್ರಶಸ್ತಿ

By Staff
|
Google Oneindia Kannada News

ಗಾಯಕ ಆರ್‌.ಕೆ.ಶ್ರೀಕಂಠನ್‌ಗೆ ಸ್ವಾಮಿರಾವ್‌ ಪ್ರಶಸ್ತಿ
ಈ ಹಿಂದೆ ಡಾ.ಎಂ.ಎಸ್‌.ಸುಬ್ಬಲಕ್ಷ್ಮೀ,ಡಾ.ಎಂ.ಬಾಲಮುರಳೀಕೃಷ್ಣ ಪ್ರಶಸ್ತಿಗೆ ಪಾತ್ರರಾಗಿದ್ದರು.

ಬೆಂಗಳೂರು : ಶ್ರೀ ರಾಮಸೇವಾ ಮಂಡಳಿ ಟ್ರಸ್ಟ್‌ ವತಿಯಿಂದ ನೀಡಲಾಗುವ ಪ್ರಸಕ್ತ ಸಾಲಿನ ಎಸ್‌.ವಿ.ನಾರಾಯಣ ಸ್ವಾಮಿರಾವ್‌ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿಯನ್ನು ಹಿರಿಯ ಗಾಯಕ ಆರ್‌.ಕೆ.ಶ್ರೀಕಂಠನ್‌ ಅವರಿಗೆ ಶುಕ್ರವಾರ ಪ್ರದಾನ ಮಾಡಲಾಯಿತು.

ಕೋಟೆ ಹೈಸ್ಕೂಲ್‌ ಮೈದಾನದಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಮಹಾರಾಷ್ಟ್ರ ರಾಜ್ಯಪಾಲ ಎಸ್‌.ಎಂ.ಕೃಷ್ಣ ಅವರ ಪತ್ನಿ ಪ್ರೇಮಾ ಕೃಷ್ಣ ಅವರು ಶ್ರೀಕಂಠನ್‌ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಶ್ರೀಕಂಠನ್‌, ಈ ಪ್ರತಿಷ್ಠಿತ ವೇದಿಕೆಯಲ್ಲಿ ಸಂಗೀತ ನೀಡಿ ಶ್ರೋತೃಗಳಿಂದ ಮೆಚ್ಚುಗೆ ಪಡೆಯುವುದೇ ಒಂದು ಸರ್ಟಿಫಿಕೇಟು. ಇಂತಹ ವೇದಿಕೆಯಲ್ಲಿ ಪ್ರಶಸ್ತಿ ಪಡೆಯುತ್ತಿರುವುದು ನನ್ನ ಜೀವನದಲ್ಲೇ ಒಂದು ಮೈಲಿಗಲ್ಲು ಎಂದರು.

ಈ ಮೊದಲು ಡಾ.ಎಂ.ಎಸ್‌.ಸುಬ್ಬುಲಕ್ಷ್ಮೀ, ವಿದ್ವಾನ್‌ ಡಾ.ಎಂ.ಬಾಲಮುರಳೀಕೃಷ್ಣ, ವಿದ್ವಾನ್‌ ಆರ್‌.ಆರ್‌.ಕೇಶವಮೂರ್ತಿ, ವಿದ್ವಾನ್‌ ಎ.ಕೆ.ಸಿ.ನಟರಾಜನ್‌ ಅವರು ಈ ಪ್ರಶಸ್ತಿಯಿಂದ ಪುರಸ್ಕೃತರಾಗಿದ್ದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X