ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಾನಪದ ಲೋಕದ ನಾಗೇಗೌಡರಿಗೆ ಪಂಪ ಪ್ರಶಸ್ತಿ

By Staff
|
Google Oneindia Kannada News

ಜಾನಪದ ಲೋಕದ ನಾಗೇಗೌಡರಿಗೆ ಪಂಪ ಪ್ರಶಸ್ತಿ
ಹಿರಿಯ ಜಾನಪದ ವಿದ್ವಾಂಸರಿಗೆ ರಾಜ್ಯ ಸರ್ಕಾರದ ಗೌರವ

ಬೆಂಗಳೂರು : ನಾಡಿನ ಹಿರಿಯ ಲೇಖಕ ಮತ್ತು ಜಾನಪದ ವಿದ್ವಾಂಸ ಎಚ್‌.ಎಲ್‌.ನಾಗೇಗೌಡ ಅವರನ್ನು 2004ನೇ ಸಾಲಿನ ಪ್ರತಿಷ್ಠಿತ ಪಂಪ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ರಾಜ್ಯ ಸರ್ಕಾರದ ಈ ಪ್ರಶಸ್ತಿ ಒಂದು ಲಕ್ಷ ರೂ.ನಗದು ಮತ್ತು ಫಲಕವನ್ನು ಒಳಗೊಂಡಿದೆ. ಕವಿ, ನಾಟಕಗಾರ ಡಾ.ಚಂದ್ರಶೇಖರ್‌ ಕಂಬಾರ ಅವರ ಅಧ್ಯಕ್ಷತೆಯಲ್ಲಿ ರೂಪುಗೊಂಡಿದ್ದ ಸಮಿತಿ ಪ್ರಶಸ್ತಿಗೆ ನಾಗೇಗೌಡ ಅವರನ್ನು ಆಯ್ಕೆ ಮಾಡಿದೆ.

ಸೃಜನಶೀಲ ಮತ್ತು ಸೃಜನೇತರ ವಿಭಾಗಗಳಿಗೆ ಸರದಿಯಂತೆ ಸರ್ಕಾರ ಪ್ರಶಸ್ತಿಯನ್ನು ನೀಡುತ್ತಿದೆ. ರಾಮನಗರದಲ್ಲಿ ‘ಜಾನಪದ ಲೋಕ’ ವನ್ನು ರೂಪಿಸುವ ಮೂಲಕ ನಾಡಿನ ಜಾನಪದ ಕಲೆಗಳ ಉಳಿವು ಮತ್ತು ಅಧ್ಯಯನಕ್ಕೆ ನಾಗೇಗೌಡ ವಿಶಿಷ್ಟ ಸೇವೆ ಸಲ್ಲಿಸಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X