ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಂಧ್ರಕವಿ ವರವರರಾವ್‌ ಮನೆ ಶೋಧಕ್ಕೆ ವಾರಂಟ್‌

By Staff
|
Google Oneindia Kannada News

ಆಂಧ್ರಕವಿ ವರವರರಾವ್‌ ಮನೆ ಶೋಧಕ್ಕೆ ವಾರಂಟ್‌
ನಕ್ಸಲ್‌ನಾಯಕರಿಗೆ ವರವರರಾವ್‌ರಿಂದ ಆಕ್ಷೇಪಾರ್ಹ ಪತ್ರಗಳು?

ಹೈದರಾಬಾದ್‌ : ಆಂಧ್ರಪ್ರದೇಶದ ಕ್ರಾಂತಿಕಾರಿ ಬರಹಗಾರ ವರವರರಾವ್‌ ಅವರ ಮನೆ ಶೋಧಕ್ಕೆ ಗುಂಟೂರಿನ ಸ್ಥಳೀಯ ನ್ಯಾಯಾಲಯ ತಪಾಸಣಾ ವಾರಂಟ್‌ ಹೊರಡಿಸಿದೆ.

ರಾಜ್ಯದ ಪ್ರಮುಖ ನಕ್ಸಲ್‌ ನಾಯಕನೊಬ್ಬನ ದೂತರೆನ್ನಲಾದ ಇಬ್ಬರು ವ್ಯಕ್ತಿಗಳಿಂದ ವರವರರಾವ್‌ ಅವರು ಬರೆದಿದ್ದಾರೆನ್ನಲಾದ ಕೆಲ ಪತ್ರಗಳನ್ನು ವಶಪಡಿಸಿಕೊಂಡಿದ್ದ ಪೊಲೀಸರು, ಹೆಚ್ಚಿನ ತನಿಖೆಗಾಗಿ ವರವರರಾವ್‌ ನಿವಾಸವನ್ನು ತಪಾಸಣೆ ನಡೆಸಲು ಅನುಮತಿ ನೀಡಬೇಕೆಂದು ನ್ಯಾಯಾಲಯವನ್ನು ಕೋರಿದ್ದರು.

ವರವರರಾವ್‌ ಬರೆದಿದ್ದ ಪತ್ರಗಳು ಸಿಪಿಐ(ಮಾವೋವಾದಿ)ಗುಂಪಿನ ಕಾರ್ಯದರ್ಶಿ ರಾಮಕೃಷ್ಣ ಎಂಬಾತನಿಗೆ ತಲುಪಬೇಕಿತ್ತು. ಆ ಪತ್ರಗಳಲ್ಲಿ ಕೆಲವು ಆಕ್ಷೇಪಾರ್ಹ ಅಂಶಗಳಿದ್ದು, ವರವರರಾವ್‌ ನಿವಾಸದ ತಪಾಸಣೆ ಅತ್ಯಗತ್ಯ ಎಂದು ಪೊಲೀಸರು ನ್ಯಾಯಾಲಯದ ಗಮನಕ್ಕೆ ತಂದಿದ್ದರು.

‘ತಮ್ಮ ನಿವಾಸವನ್ನು ತಪಾಸಣೆಗೊಳಪಡಿಸುವುದು ಒಂದು ಹಾಸ್ಯಾಸ್ಪದ ಸಂಗತಿ’ ಎಂದು ವರವರರಾವ್‌ ಪ್ರತಿಕ್ರಿಯಿಸಿದ್ದಾರೆ.
(ಏಜನ್ಸೀಸ್‌)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X