ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಳೆ ಕೈಕೊಟ್ಟರೆ ರೈತರ ಕೈಹಿಡಿದೆತ್ತಲು ಇಪ್ಕೋ ವಿಮೆ

By Staff
|
Google Oneindia Kannada News

ಮಳೆ ಕೈಕೊಟ್ಟರೆ ರೈತರ ಕೈಹಿಡಿದೆತ್ತಲು ಇಪ್ಕೋ ವಿಮೆ
ಭಾರತೀಯ ರೈತರ ರಸಗೊಬ್ಬರ ಸಹಕಾರ(ಇಫ್ಕೋ)ದ ಸಹಯೋಗದೊಂದಿಗೆ ವಿಮೆ ಯೋಜನೆ

ಬೆಂಗಳೂರು : ಇನ್ನು ಮುಂದೆ ಮಳೆ ಕಡಿಮೆಯಾದರೆ ಅದಕ್ಕೂ ವಿಮೆ ದೊರೆಯಲಿದೆ. ಇಫ್ಕೋ ಟೋಕಿಯೋ ಸಾಮಾನ್ಯವಿಮಾ ಸಂಸ್ಥೆಯು ಸೋಮವಾರ ಮಳೆ ವಿಮಾ ಯೋಜನೆಯನ್ನು ಪ್ರಕಟಿಸಿದೆ. ಮಳೆ ಕೊರತೆಯಿಂದ ಬೆಳೆ ಹಾನಿಗೊಳಗಾಗುವ ರೈತರಿಗೆ ಯೋಜನೆ ಪೂರಕವಾಗಲಿದೆ.

ಮುಂಗಾರು ಮಳೆ (ಜೂನ್‌ನಿಂದ -ಸೆಪ್ಟಂಬರ್‌ವರೆಗೆ)ಕೊರತೆಯಿಂದ ನಿರೀಕ್ಷಿತ ಇಳುವರಿ ಬಾರದ ರೈತರು ಈ ವಿಮೆಯ ಲಾಭ ಪಡೆಯಬಹುದಾಗಿದೆ ಎಂದು ಸಂಸ್ಥೆಯ ಮುಖ್ಯಸ್ಥ ಅಜಿತ್‌ ನಾರಾಯಣ್‌ ಸುದ್ದಿಗಾರರಿಗೆ ಹೇಳಿದರು.

ಹವಾಮಾನದ ಅವಲಂಬನೆಯ ಒತ್ತಡ ಕಡಿಮೆಮಾಡುವುದು ಯೋಜನೆಯ ಉದ್ದೇಶವಾಗಿದೆ. ಪ್ರಾಯೋಗಿಕವಾಗಿ ಪೈಲಟ್‌ ಯೋಜನೆಯೆಂದು ಕರ್ನಾಟಕ, ಗುಜರಾತ್‌, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದ 9ಜಿಲ್ಲೆಗಳಲ್ಲಿ ಯೋಜನೆ ಅನುಷ್ಠಾನಗೊಳ್ಳುತ್ತಿದೆ. ಇದರ ಫಲಿತಾಂಶ ಗಮನಿಸಿ, ಉಳಿದ ರಾಜ್ಯಗಳಿಗೆ ವಿಸ್ತರಿಸಲಾಗುವುದು ಎಂದರು.

ಇದು ಗುಂಪು ವಿಮಾ ಯೋಜನೆಯಾಗಿದ್ದು, ವಿಮೆಯ ಕಂತು ಕಡಿಮೆ ಪ್ರಮಾಣದಲ್ಲಿದೆ. ಸಹಕಾರಿ ಸಂಘ ಅಥವಾ ಸಹಕಾರಿ ಬ್ಯಾಂಕುಗಳ ಮೂಲಕ ವಿಮೆಗೆ ಅನುಕೂಲ ಕಲ್ಪಿಸಲಾಗಿದೆ.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X