ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮಳೆ ಕೈಕೊಟ್ಟರೆ ರೈತರ ಕೈಹಿಡಿದೆತ್ತಲು ಇಪ್ಕೋ ವಿಮೆ
ಮಳೆ
ಕೈಕೊಟ್ಟರೆ
ರೈತರ
ಕೈಹಿಡಿದೆತ್ತಲು
ಇಪ್ಕೋ
ವಿಮೆ
ಭಾರತೀಯ
ರೈತರ
ರಸಗೊಬ್ಬರ
ಸಹಕಾರ(ಇಫ್ಕೋ)ದ
ಸಹಯೋಗದೊಂದಿಗೆ
ವಿಮೆ
ಯೋಜನೆ
ಮುಂಗಾರು ಮಳೆ (ಜೂನ್ನಿಂದ -ಸೆಪ್ಟಂಬರ್ವರೆಗೆ)ಕೊರತೆಯಿಂದ ನಿರೀಕ್ಷಿತ ಇಳುವರಿ ಬಾರದ ರೈತರು ಈ ವಿಮೆಯ ಲಾಭ ಪಡೆಯಬಹುದಾಗಿದೆ ಎಂದು ಸಂಸ್ಥೆಯ ಮುಖ್ಯಸ್ಥ ಅಜಿತ್ ನಾರಾಯಣ್ ಸುದ್ದಿಗಾರರಿಗೆ ಹೇಳಿದರು.
ಹವಾಮಾನದ ಅವಲಂಬನೆಯ ಒತ್ತಡ ಕಡಿಮೆಮಾಡುವುದು ಯೋಜನೆಯ ಉದ್ದೇಶವಾಗಿದೆ. ಪ್ರಾಯೋಗಿಕವಾಗಿ ಪೈಲಟ್ ಯೋಜನೆಯೆಂದು ಕರ್ನಾಟಕ, ಗುಜರಾತ್, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದ 9ಜಿಲ್ಲೆಗಳಲ್ಲಿ ಯೋಜನೆ ಅನುಷ್ಠಾನಗೊಳ್ಳುತ್ತಿದೆ. ಇದರ ಫಲಿತಾಂಶ ಗಮನಿಸಿ, ಉಳಿದ ರಾಜ್ಯಗಳಿಗೆ ವಿಸ್ತರಿಸಲಾಗುವುದು ಎಂದರು.
ಇದು ಗುಂಪು ವಿಮಾ ಯೋಜನೆಯಾಗಿದ್ದು, ವಿಮೆಯ ಕಂತು ಕಡಿಮೆ ಪ್ರಮಾಣದಲ್ಲಿದೆ. ಸಹಕಾರಿ ಸಂಘ ಅಥವಾ ಸಹಕಾರಿ ಬ್ಯಾಂಕುಗಳ ಮೂಲಕ ವಿಮೆಗೆ ಅನುಕೂಲ ಕಲ್ಪಿಸಲಾಗಿದೆ.
(ಪಿಟಿಐ)
ಮುಖಪುಟ / ವಾರ್ತೆಗಳು
Comments
Story first published: Monday, May 9, 2005, 23:53 [IST]