ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಸವಶ್ರೀ ಪ್ರಶಸ್ತಿ ಪಡೆದ ಪಾಪುಗೆ ಶರಣು ಶರಣು

By Staff
|
Google Oneindia Kannada News

ಬಸವಶ್ರೀ ಪ್ರಶಸ್ತಿ ಪಡೆದ ಪಾಪುಗೆ ಶರಣು ಶರಣು
ಬಸವ ವೇದಿಕೆಯಿಂದ ಇಬ್ರಾಹಿಂ ಅವರಿಗೆ ‘ಸಾಹಿತ್ಯಶ್ರೀ’ ಪ್ರಶಸ್ತಿ

ಬೆಂಗಳೂರು : ಹಿರಿಯ ಪತ್ರಕರ್ತ ಡಾ.ಪಾಟೀಲ ಪುಟ್ಟಪ್ಪ ಹಾಗೂ ಶರಣ ತತ್ವ ಪ್ರಚಾರಕ ಇಬ್ರಾಹಿಂ ಸುತಾರ ಅವರನ್ನು ಪ್ರಸಕ್ತ ಸಾಲಿನ ಬಸವಶ್ರೀ ಮತ್ತು ಸಾಹಿತ್ಯಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಬಸವ ಜಯಂತಿ ಸಂದರ್ಭದಲ್ಲಿ ಹಿರಿಯ ಚೇತನಗಳನ್ನು ಗುರುತಿಸಿ ಬಸವ ವೇದಿಕೆ, ಈ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಸಮಾಜ ಸುಧಾರಣೆಯ ಹರಿಕಾರ ಬಸವಣ್ಣ ರವರ ವಿಚಾರಧಾರೆಗಳನ್ನು ತಮ್ಮ ಬದುಕಿನಲ್ಲಿ ರೂಢಿಸಿಕೊಂಡಿರುವ ಇಬ್ರಾಹಿಂರವರಿಗೆ ಸಾಹಿತ್ಯಶ್ರೀ ಪ್ರಶಸ್ತಿ ಮತ್ತು ಪತ್ರಿಕೋದ್ಯಮದ ಪ್ರಗತಿಗೆ ಸಾಕಷ್ಟು ಶ್ರಮಿಸಿದ ಪಾಟೀಲ್‌ ಪುಟ್ಟಪ್ಪನವರಿಗೆ ಬಸವಶ್ರೀ ಪ್ರಶಸ್ತಿ ಲಭಿಸಿದೆ.

ಪ್ರಶಸ್ತಿಯು 5 ಸಾವಿರ ರೂಪಾಯಿ ನಗದು, ಫಲಕ ಮತ್ತು ಪ್ರಶಸ್ತಿ ಪತ್ರಗಳನ್ನು ಒಳಗೊಂಡಿದೆ. ಮೇ 11ರಂದು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿರುವ ಸಮಾರಂಭದಲ್ಲಿ ಮುಖ್ಯಮಂತ್ರಿ ಎನ್‌.ಧರ್ಮಸಿಂಗ್‌ ಪ್ರಶಸ್ತಿ ಪ್ರದಾನ ಮಾಡುವರು.
(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X