ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಂಟು ಮಂದಿ ಶರಾವತಿಗೆ ಹಾರ : ದುಃಖದ ಸಾಗರ

By Staff
|
Google Oneindia Kannada News

ಎಂಟು ಮಂದಿ ಶರಾವತಿಗೆ ಹಾರ : ದುಃಖದ ಸಾಗರ
ಚೌಡೇಶ್ವರಿಯ ದರ್ಶನಕ್ಕೆ ತೆರಳಿದವರು ಜೀವಂತವಾಗಿ ಮರಳಲೇ ಇಲ್ಲ!

ಶಿವಮೊಗ್ಗ : ಒಬ್ಬರನ್ನು ಉಳಿಸಲು ಮತ್ತೊಬ್ಬರು ತೆರಳಿ, ಸರದಿಯಂತೆ ಆರು ಮಕ್ಕಳು ಸೇರಿದಂತೆ ಒಟ್ಟು ಎಂಟು ಮಂದಿ ಸಾವನ್ನಪ್ಪಿದ ಶನಿವಾರದ ದುರ್ಘಟನೆಯ ನೋವು ಮೃತ ಕುಟುಂಬದಲ್ಲಿ ಈಗ ಹೆಪ್ಪುಕಟ್ಟಿದೆ.

ಭಾನುವಾರ ಮರಣೋತ್ತರ ಪರೀಕ್ಷೆಗಳ ನಂತರ ಶವಗಳನ್ನು ಪಡೆದ ಸಂದರ್ಭದಲ್ಲಿ, ಆರು ಮಂದಿ ಮೊಮ್ಮಕ್ಕಳನ್ನು ಕಳೆದುಕೊಂಡಿದ್ದ ಪ್ರೇಮಾಸಿಂಗ್‌ ರೋದನ ಮುಗಿಲು ಮುಟ್ಟಿತ್ತು. ಇವರ ಅಪ್ಪ ಅಮ್ಮನಿಗೆ ನಾನು ಏನಂತಾ ಉತ್ತರಿಸಲಿ? ನಾನು ಮೊಮ್ಮಕ್ಕಳ ಜೊತೆ ಸತ್ತಿದ್ದರೆ ಚೆನ್ನಾಗಿತ್ತು ಎಂದು ಅವರು ಬಿಕ್ಕಿಬಿಕ್ಕಿ ಅಳುತ್ತಿದ್ದರು.

ಸಿಗಂಟೂರಿನ ಚೌಡೇಶ್ವರಿ ದರ್ಶನಕ್ಕೆ ತೆರಳಿದ್ದ ಕುಟುಂಬದಲ್ಲಿಂದು ನೋವಿನ ಅಲೆ. ಮೃತಪಟ್ಟವರು ತುಮಕೂರು ಮೂಲದ ರಜಪೂತ ಕುಟುಂಬಕ್ಕೆ ಸೇರಿದವರು. ಶನಿವಾರ ಮಧ್ಯಾಹ್ನ ದೇವಾಲಯದಲ್ಲಿ ತಾವು ಬುತ್ತಿಯಲ್ಲಿ ತಂದಿದ್ದ ಊಟ ಮುಗಿಸಿದ ಕುಟುಂಬ, ಅಲ್ಲಿಂದ ಒಂದೂವರೆ ಕಿ.ಮೀ.ದೂರದ ಶರಾವತಿ ಹಿನ್ನೀರು ತಾಣವಾದ ಮಕ್ಕಿಗದ್ದೆಗೆ ತೆರಳಿ ಸ್ನಾನಕ್ಕೆ ಇಳಿದಿದ್ದರು. ಅದರಲ್ಲಿ ಒಬ್ಬರು ಕೆಸರಲ್ಲಿ ಸಿಕ್ಕಿದರು. ಅವರನ್ನು ರಕ್ಷಿಸಲು ತೆರಳಿ, ಎಲ್ಲರೂ ಕೆಸರು ಪಾಲಾದರು.

ದುರಂತದಲ್ಲಿ ಉಳಿದಿರುವ ಪ್ರೇಮಾ ಬಾಯಿ ಮತ್ತು ಲತಾ, ಸಾಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೇಸಿಗೆಯಲ್ಲಿ ಹಿನ್ನೀರಿನ ಪ್ರಮಾಣ ಕುಸಿದು, ಕೆಸರು ಹೆಚ್ಚಿದ್ದರಿಂದ ದುರಂತ ಸಂಭವಿಸಿದೆ ಎನ್ನಲಾಗಿದೆ.

ಮೃತಪಟ್ಟವರನ್ನು ಉಷಾ, ಶ್ರುತಿ, ಸುಮನ್‌, ಸುನಿಲ್‌, ಭವಾನಿ ಬಾಯಿ, ಅವಿನಾಶ್‌, ಆದರ್ಶ, ಪೂಜಾ ಎಂದು ಗುರ್ತಿಸಲಾಗಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X