ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಗಲಕೋಟೆ ಉದ್ವಿಗ್ನ : ಮೂರು ದಿನ ನಿಷೇಧಾಜ್ಞೆ

By Staff
|
Google Oneindia Kannada News

ಬಾಗಲಕೋಟೆ ಉದ್ವಿಗ್ನ : ಮೂರು ದಿನ ನಿಷೇಧಾಜ್ಞೆ
ಕಿಡಿಗೇಡಿಗಳಿಂದ ಈದ್ಗಾ ಮೈದಾನದಲ್ಲಿನ ಗುಮ್ಮಟಗಳ ಧ್ವಂಸ, ನಗರದಲ್ಲಿ ಹಿಂಸೆ

ಬಾಗಲಕೋಟೆ : ನವನಗರದ ಮಸೀದಿಯ ಮೂರು ಗುಮ್ಮಟಗಳನ್ನು ಕಿಡಿಕೇಡಿಗಳು ಕೆಡವಿರುವ ಹಿನ್ನೆಲೆಯಲ್ಲಿ ಬಾಗಲಕೋಟೆಯಲ್ಲಿ ಶುಕ್ರವಾರ ಉದ್ವಿಗ್ನ ಸ್ಥಿತಿ ಉಂಟಾಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಮುಂದಿನ ಮೂರು ದಿನಗಳ ಕಾಲ ನಿಷೇಧಾಜ್ಞೆಯನ್ನು ವಿಧಿಸಲಾಗಿದೆ.

ನವನಗರದ ಈದ್ಗಾ ಮೈದಾನದಲ್ಲಿನ ಗುಮ್ಮಟಗಳನ್ನು ಕೆಡವಿದ ಕಿಡಿಗೇಡಿಗಳು, ಗೋಡೆಯ ಮೇಲೆ ‘ಓಂ’ ಎಂದು ಬರೆದಿದ್ದರು ಎನ್ನಲಾಗಿದೆ. ಈ ಸಂಬಂಧ ನಗರದಲ್ಲಿ ಕಲ್ಲೂತೂರಾಟದ ಪ್ರಕರಣಗಳು ನಡೆದಿವೆ. ಕಲ್ಲು ತೂರಾಟದಲ್ಲಿ ಒಂದು ಬಸ್‌ ಸೇರಿದಂತೆ ಮೂರು ವಾಹನಗಳು ಜಖಂಗೊಂಡಿವೆ. ಅನೇಕರಿಗೆ ಗಾಯಗಳಾಗಿವೆ.

ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಅಹಿತಕರ ಘಟನೆಗಳ ತಪ್ಪಿಸಲು ನಗರದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿದೆ ಎಂದು ಪೊಲೀಸ್‌ ವರಿಷ್ಠ ಬಿ.ಎ.ಪದ್ಮನಯನ ತಿಳಿಸಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X