ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದರಿದ್ರ ನಾರಾಯಣರ ಸಮರಕ್ಕೆ ಮುನ್ನ ದೇವಿಗೆ ನಮನ

By Staff
|
Google Oneindia Kannada News

ದರಿದ್ರ ನಾರಾಯಣರ ಸಮರಕ್ಕೆ ಮುನ್ನ ದೇವಿಗೆ ನಮನ
ಏ.30ರ್ಯಾಲಿಯನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ -ದೇವೇಗೌಡ

ಮೈಸೂರು : ಭೂಗಳ್ಳರ ವಿರುದ್ಧ ದೇವೇಗೌಡ ಸಮರ ಸಾರಿದ್ದು, ಸಮರದಲ್ಲಿ ಜಯ ದೊರೆಯಲೆಂದು ಚಾಮುಂಡೇಶ್ವರಿಯ ಆಶೀರ್ವಾದ ಪಡೆಯಲು ನಗರಕ್ಕೆ ಆಗಮಿಸಿದ್ದರು.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಏ.30ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಸಲುದ್ದೇಶಿಸಿರುವ ದರಿದ್ರ ನಾರಾಯಣರ ಯುದ್ಧ(ರ್ಯಾಲಿ)ವನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ. ಪ್ರತಿ ಸಲ ಸಮರಕ್ಕೆ ಹೋಗುವಾಗಲೆಲ್ಲಾ ಚಾಮುಂಡೇಶ್ವರಿಗೆ ನಮಿಸುತ್ತೇನೆ ಎಂದರು.

ರ್ಯಾಲಿಯನ್ನು ‘ಯುದ್ಧ ಪರ್ವ’ ಎಂದು ಬಣ್ಣಿಸಿದ ದೇವೇಗೌಡ, ನಾನು ದೇವರ ಮೇಲೆ ನಂಬಿಕೆ ಹೊಂದಿದ್ದೇನೆ. ಬಡವರಿಗೆ ನ್ಯಾಯ ದೊರಕಿಸಲು ಉಸಿರಿರುವ ತನಕ ಹೋರಾಟ ನಡೆಸುತ್ತೇನೆ. ಬಡವರ ಬಗ್ಗೆ ಧ್ವನಿ ಎತ್ತಿದ ಈ ಬಡಪಾಯಿ ಮೇಲೆ ರಾಷ್ಟ್ರೀಯ ಪಕ್ಷಗಳು ದಾಳಿ ಮಾಡುತ್ತಿವೆ ಎಂದು ದೂರಿದರು.
(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X