ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನಲ್ಲಿ ಮೇ1ರಂದು ಧಾರವಾಡ ಉತ್ಸವ

By Staff
|
Google Oneindia Kannada News

ಬೆಂಗಳೂರಿನಲ್ಲಿ ಮೇ1ರಂದು ಧಾರವಾಡ ಉತ್ಸವ
ಹಿಂದೂಸ್ತಾನಿ ಸಂಗೀತ ಪ್ರಿಯರ ಮನತಣಿಸಲು ಸಂಗೀತದ ಹಬ್ಬ

ಬೆಂಗಳೂರು : ಹಿಂದೂಸ್ತಾನಿ ಸಂಗೀತ ಪ್ರಿಯರಿಗೆ ಮಜವೋ ಮಜ! ಸಂಗೀತ ಪ್ರೇಮಿಗಳ ಮನತಣಿಸಲು ಧಾರವಾಡ ಉತ್ಸವವನ್ನು ಮೇ 1ರಂದು ನಗರದಲ್ಲಿ ಆಯೋಜಿಸಲಾಗಿದೆ.

ಗುರುರಾವ್‌ ದೇಶಪಾಂಡೆ ಸಂಗೀತ ಸಮಿತಿ ಈ ಕಾರ್ಯಕ್ರಮವನನು ಸಂಘಟಿಸಿದೆ. ಮೇ 1ರಂದು ನಗರದ ರೆಸ್‌ಕೋರ್ಸ್‌ ರಸ್ತೆಯಲ್ಲಿನ ಭಾರತೀಯ ವಿದ್ಯಾಭವನದ ‘ಕಿಚ್ಚ’ ಸಂಭಾಗಣದಲ್ಲಿ ಅಂದು ಬೆಳಗ್ಗೆ 9.30ಕ್ಕೆ ಧಾರವಾಡ ಉತ್ಸವ ಆರಂಭಗೊಳ್ಳಲಿದೆ.

ಭೀಮಸೇನ ಜೋಶಿ, ಮಲ್ಲಿಕಾರ್ಜುನ ಮನ್ಸೂರ್‌, ಗಂಗೂಬಾಯಿ ಹಾನಗಲ್‌, ಪಂಚಾಕ್ಷರಿ ಗವಾಯಿ, ದ.ರಾ.ಬೇಂದ್ರೆ, ಗಿರೀಶ್‌ ಕಾರ್ನಾಡ್‌ -ಹೀಗೆ ಸಂಗೀತ ಮತ್ತು ಸಾಹಿತ್ಯ ದಿಗ್ಗಜರನ್ನು ಧಾರವಾಡ ಜಿಲ್ಲೆ ಒಳಗೊಂಡಿತದ್ದು, ಅವರ ಸವಿನೆನಪಿಗೆ ಧಾರವಾಡ ಉತ್ಸವ ಒಂದು ವೇದಿಕೆಯಾಗಲಿದೆ ಎಂದು ಸಮಿತಿ ಅಧ್ಯಕ್ಷ ವಿನಾಯಕ ತೋರ್ವಿ ತಿಳಿಸಿದ್ದಾರೆ.

ಧಾರವಾಡ ಉತ್ಸವಕ್ಕೆ ಮುಕ್ತ ಪ್ರವೇಶವನ್ನು ಕಲ್ಪಿಸಲಾಗಿದೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ: 23305701, 23373889.

(ಇನ್ಫೋ ವಾರ್ತೆ)

ಮುಖಪುಟ / ಬೆಂಗಳೂರು ಡೈರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X