ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ನಾಯಕತ್ವ ಬದಲಾವಣೆಗೆ ವಾಜಪೇಯಿ ಸಮ್ಮತಿ

By Staff
|
Google Oneindia Kannada News

ಬಿಜೆಪಿ ನಾಯಕತ್ವ ಬದಲಾವಣೆಗೆ ವಾಜಪೇಯಿ ಸಮ್ಮತಿ
ಆಡ್ವಾಣಿ ಪದಚ್ಯುತಿಗೆ ತೆರೆಮರೆಯ ಹುನ್ನಾರ, ಪಕ್ಷದ ನಾಯಕತ್ವಕ್ಕೆ ರಂಗ ತಾಲೀಮು

ನವದೆಹಲಿ: ಭಾರತೀಯ ಜನತಾಪಕ್ಷದ ನೇತೃತ್ವವನ್ನು ಮುಂದಿನ ಪೀಳಿಗೆಯ ನಾಯಕರಿಗೆ ವಹಿಸಬೇಕೆಂಬ ಅರೆಸ್ಸೆಸ್‌ ಮುಖಂಡ ಕೆ.ಎಸ್‌.ಸುದರ್ಶನ್‌ ವಾದವನ್ನು, ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಸಮ್ಮತಿಸಿರುವುದು ಬಿಜೆಪಿ ಪಾಳಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ವಾಜಪೇಯಿ, ಬಿಜೆಪಿ ಅಧ್ಯಕ್ಷ ಎಲ್‌.ಕೆ. ಆಡ್ವಾಣಿ ಪದತ್ಯಾಗ ಮಾಡುವ ವಿಚಾರದಲ್ಲಿ ಸ್ವತಃ ಆಡ್ವಾಣಿ ಮತ್ತು ಪಕ್ಷ ನಿರ್ಧರಿಸಬೇಕು ಎಂದರು.

ಪಕ್ಷದ ನಾಯಕತ್ವವನ್ನುವಹಿಸಿಕೊಳ್ಳಲು ಎರಡನೇ ಹಂತದ ವ್ಯವಸ್ಥೆಗೆ ರಂಗ ಸಜ್ಜಾಗಿದೆ. ಇತ್ತೀಚಿನ ದಿನಗಳಲ್ಲಿ ನಾನು ಯೂವುದೇ ಕಾರ್ಯಕ್ಕಾಗಿ ನಿಯುಕ್ತಿಗೊಂಡಿಲ್ಲ. ಹೀಗಾಗಿ ಯಾವ ಕೆಲಸವನ್ನು ಮಾಡುತ್ತಿಲ್ಲ ಎಂದು ವಾಜಪೇಯಿ ಹೇಳಿದರು.

ವಾಜಪೇಯಿ ಅವರ ಬಹಿರಂಗ ಹೇಳಿಕೆಯಿಂದ ಬಿಜೆಪಿ ನಾಯಕತ್ವದ ಪ್ರಶ್ನೆ ಮತ್ತೆ ಚರ್ಚೆಗೆ ಗ್ರಾಸವಾಗಿದೆ.
(ಏಜನ್ಸೀಸ್‌)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X