ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಗರದ ಅಪ್ಪಿಕೋ ಚಳವಳಿಯಲ್ಲಿ ವಸುಂಧರಾ ದಾಸ್‌

By Staff
|
Google Oneindia Kannada News

ನಗರದ ಅಪ್ಪಿಕೋ ಚಳವಳಿಯಲ್ಲಿ ವಸುಂಧರಾ ದಾಸ್‌
ಸಂಚಾರ ಸುವ್ಯವಸ್ಥೆಗಾಗಿ 700ಮರಗಳಿಗೆ ಕೊಡಲಿ : ಬಿ.ಎಂ.ಪಿ. ಯೋಜನೆ

ಬೆಂಗಳೂರು : ಅಪ್ಪಿಕೋ ಚಳವಳಿ ಮಾದರಿಯಲ್ಲಿಯೇ ರಾಜಧಾನಿ ನಗರದ ಮರಗಳನ್ನು ಉಳಿಸಲು, ಕಳೆದ ಒಂದು ವಾರದಿಂದ ಪರಿಸರ ಪ್ರೇಮಿಗಳು ಚಳವಳಿ ನಡೆಸುತ್ತಿದ್ದಾರೆ.

ರಸ್ತೆ ಸಂಚಾರವನ್ನು ಸುಗಮಗೊಳಿಸಲು ನಗರದಲ್ಲಿನ 700 ಮರಗಳನ್ನು ಕತ್ತರಿಸಲು ಬೆಂಗಳೂರು ಮಹಾನಗರ ಪಾಲಿಗೆ ಮುಂದಾಗಿರುದನ್ನು ಪರಿಸರವಾದಿಗಳು ಖಂಡಿಸಿದ್ದಾರೆ. ರೆಸಿಡೆನ್ಸಿ ರಸ್ತೆಯಲ್ಲಿ ನಡೆದ ಚಳವಳಿಯಲ್ಲಿ ನಟಿ ವಸುಂಧರಾ ದಾಸ್‌ ಪಾಲ್ಗೊಳ್ಳುವ ಮೂಲಕ ಚಳವಳಿಯನ್ನು ಮತ್ತಷ್ಟು ಬಲಪಡಿಸಿದ್ದಾರೆ.

ಬೆಂಗಳೂರು ಮಹಾನಗರ ಪಾಲಿಕೆಯ ನೌಕರರು ಮರ ಕತ್ತರಿಸುವ ಕಾರ್ಯಕ್ಕೆ ಅಡ್ಡಿ ಪಡಿಸಿದ ಅರೋಪದನ್ವಯ ಈ ಹಿಂದೆ ಕೆಲವರ ಮೇಲೆ ಪೋಲಿಸರು ದೂರು ದಾಖಲಿಸಿದ್ದರೂ ಚಳವಳಿಯ ತೀವ್ರತೆ ಕಡಿಮೆಯಾಗಿಲ್ಲ. ಮರಗಳನ್ನು ಉಳಿಸಿಕೊಳ್ಳುವ ಪ್ರಯತ್ನ ಮುಂದುವರೆಯಲಿದೆ ಎಂದು ಪರಿಸರವಾದಿಗಳು ತಿಳಿಸಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ಬೆಂಗಳೂರು ಡೈರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X