ಅಂಬೇಡ್ಕರ್ಗೆ ಅಪಚಾರ: ಹುಬ್ಬಳ್ಳಿ-ಧಾರವಾಡ ಬಂದ್
ಅಂಬೇಡ್ಕರ್ಗೆ
ಅಪಚಾರ:
ಹುಬ್ಬಳ್ಳಿ-ಧಾರವಾಡ
ಬಂದ್
ಅವಳಿ
ನಗರಗಳಲ್ಲಿ
ಡಿಎಸ್ಎಸ್
ಕರೆ
ನೀಡಿದ್ದ
ಬಂದ್ನಲ್ಲಿ
ವಾಹನಗಳ
ಮೇಲೆ
ಕಲ್ಲುತೂರಾಟ
ಅಂಬೇಡ್ಕರ್ ಜಯಂತಿಯಂದು(ಏ.24) ಬೆಳಗಾಂವಿ ಜಿಲ್ಲೆಯ ನಿಪ್ಪಾಣಿಯಲ್ಲಿ ಕಿಡಿಗೇಡಿಗಳು ಅಂಬೇಡ್ಕರ್ ಪ್ರತಿಮೆಗೆ ಅಪಚಾರವೆಸಗಿದ ಹಿನ್ನೆಲೆ ಕರೆ ನೀಡಲಾಗಿದ್ದ ಬಂದ್ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.
ಬಸ್ಗಳು ಮತ್ತು ಆಟೋಗಳು ರಸ್ತೆಗಿಳಿಯದ ಕಾರಣ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿತ್ತು. ಅಂಗಡಿ ಮುಂಗಟ್ಟುಗಳು ತೆರೆದಿರಲಿಲ್ಲ. ಬಂದ್ ಸಂದರ್ಭದಲ್ಲಿ ಕಲ್ಲುತೂರಾಟದಿಂದ ಎಂಟು ಬಸ್ಗಳು ಸೇರಿದಂತೆ ವಿವಿಧ ವಾಹನಗಳು ಜಖಂಗೊಂಡಿವೆ ಎಂದು ಪೋಲಿಸ್ ಮೂಲಗಳು ತಿಳಿಸಿವೆ.
ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು ಅವಳಿ ನಗರಗಳಲ್ಲಿ ಮೆರವಣಿಗೆ ನಡೆಸಿ, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಅಂಬೇಡ್ಕರ್ ಪ್ರತಿಮೆಗೆ ಅಪಚಾರವೆಸಗಿದವರ ಮೇಲೆ ಕ್ರಮಜರುಗಿಸುವಂತೆ ಡಿಎಸ್ಎಸ್ ಒತ್ತಾಯಿಸಿದೆ.
ಧಾರವಾಡ ಜಿಲ್ಲಾಧಿಕಾರಿಗಳಿಗೆ ಹಾಗೂ ಹುಬ್ಬಳ್ಳಿ ತಹಸೀಲ್ದಾರ್ ಅವರಿಗೆ ದಲಿತ ಸಂಘರ್ಷ ಸಮಿತಿ ಮನವಿ ಸಲ್ಲಿಸಿದೆ.
(ಪಿಟಿಐ)
ಮುಖಪುಟ / ವಾರ್ತೆಗಳು