ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಅಟಲ್‌, ಆಡ್ವಾಣಿ ನಿರ್ಗಮಿಸದಿದ್ದರೇ ಬಿಜೆಪಿಗೆ ಕಷ್ಟ’

By Staff
|
Google Oneindia Kannada News

‘ಅಟಲ್‌, ಆಡ್ವಾಣಿ ನಿರ್ಗಮಿಸದಿದ್ದರೇ ಬಿಜೆಪಿಗೆ ಕಷ್ಟ’
ಬಿಜೆಪಿಯ ಹಿರಿಯ ನಾಯಕರು, ಮಾರ್ಗದರ್ಶಕರಾಗಿ ಮುಂದುವರೆಯಬೇಕು -ಸುದರ್ಶನ್‌

ಹುಬ್ಬಳ್ಳಿ : ಅಟಲ್‌ ಬಿಹಾರಿ ವಾಜಪೇಯಿ ಮತ್ತು ಲಾಲ್‌ ಕೃಷ್ಣ ಆಡ್ವಾಣಿ ಬಿಜೆಪಿ ಪಕ್ಷದ ನಾಯಕತ್ವದಿಂದ ನಿರ್ಗಮಿಸ ಬೇಕು ಎಂದು ವಿಶ್ವ ಹಿಂದೂ ಪರಿಷತ್‌ ಕಾರ್ಯಾಧ್ಯಕ್ಷ ಅಶೋಕ್‌ ಸಿಂಘಲ್‌ ಮತ್ತು ಆರೆಸ್ಸೆಸ್‌ ಮುಖಂಡ ಸುದರ್ಶನ್‌ ಅಭಿಪ್ರಾಯಪಟ್ಟಿದ್ದಾರೆ.

ನಗರದಲ್ಲಿ ನಿರ್ಮಾಣಗೊಂಡಿರುವ ಹಿಂದೂ ಭವನದ ಉದ್ಘಾಟನಾ ಸಮಾರಂಭದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ್‌ ಸಿಂಘಲ್‌, ಆಡ್ವಾಣಿ ಮತ್ತು ವಾಜಪೇಯಿ ನಿರ್ಗಮಿಸಿದರೇ ಮಾತ್ರ ಬಿಜೆಪಿ ಉದ್ಧಾರ ಸಾಧ್ಯ ಎಂದರು.

ವಾಜಪೇಯಿ ಅವರ ಅತಿಯಾದ ಕ್ಷಮಿಸುವ ಗುಣ ಬಿಜೆಪಿ ಭವಿಷ್ಯಕ್ಕೆ ಮಾರಕವಾಗಿದೆ. ಹಿಂದೂಗಳ ಸಹಕಾರದಿಂದ ಚುನಾವಣೆ ಎದುರಿಸುವ ಆಡ್ವಾಣಿ, ಅಧಿಕಾರ ಸಿಕ್ಕಿದ ತಕ್ಷಣ ಜಾತ್ಯತೀತರಾಗುತ್ತಾರೆ. ಹೀಗಾಗಿ ಆಡ್ವಾಣಿ ಹಿಂದೂಗಳ ಮನಗೆಲ್ಲುವಲ್ಲಿ ವಿಫಲಾಗಿದ್ದಾರೆ ಎಂದು ಸಿಂಘಲ್‌ ಅತೃಪ್ತಿ ವ್ಯಕ್ತಪಡಿಸಿದರು.

ಖಾಸಗಿ ಚಾನೆಲ್‌ಗೆ ನೀಡಿರುವ ಸಂದರ್ಶನದಲ್ಲಿ ಆರೆಸ್ಸೆಸ್‌ ಮುಖಂಡ ಸುದರ್ಶನ್‌ ಅವರು, ಹಿರಿಯ ನಾಯಕರು ಯುವಕರಿಗೆ ಜಾಗ ಮಾಡಿಕೊಡಬೇಕು. ವಾಜಪೇಯಿ ಮತ್ತು ಆಡ್ವಾಣಿ ಅವರಿಗೆ ಬಹಳ ವಯಸ್ಸಾಗಿದೆ. ಹೀಗಾಗಿ ಕಿರಿಯರಿಗೆ ಮಾರ್ಗದರ್ಶನ ನೀಡಲು ಮುಂದಾಗಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X