ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆ. ಸತ್ಯನಾರಾಯಣ, ಷಡಕ್ಷರಪ್ಪಗೆ ಟಿಎಸ್ಸಾರ್‌ ಪ್ರಶಸ್ತಿ

By Staff
|
Google Oneindia Kannada News

ಕೆ. ಸತ್ಯನಾರಾಯಣ, ಷಡಕ್ಷರಪ್ಪಗೆ ಟಿಎಸ್ಸಾರ್‌ ಪ್ರಶಸ್ತಿ
ರಾಜ್ಯ ಸರ್ಕಾರದ ಪ್ರತಿಷ್ಠಿತ ಪತ್ರಿಕೋದ್ಯಮ ಪ್ರಶಸ್ತಿ ಪ್ರಕಟ

ಬೆಂಗಳೂರು : ಹಿರಿಯ ಪತ್ರಕರ್ತರಾದ ಕೆ.ಸತ್ಯನಾರಾಯಣ, ಎಚ್‌. ಎನ್‌.ಷಡಕ್ಷರಪ್ಪ ಮತ್ತು ನಾಗಮಣಿ .ಎಸ್‌.ರಾವ್‌ ಅವರಿಗೆ ಕ್ರಮವಾಗಿ 2002,2003, 2004ನೇ ಸಾಲಿನ ಪ್ರತಿಷ್ಠಿತ ಟಿಎಸ್ಸಾರ್‌ ಸ್ಮಾರಕ ಪತ್ರಿಕೋದ್ಯಮ ಪ್ರಶಸ್ತಿ ಸಂದಿದೆ.

ಕನ್ನಡ ಪ್ರಭ ಪತ್ರಿಕೆಯ ನಿವೃತ್ತ ಸಂಪಾದಕ ಕೆ. ಸತ್ಯನಾರಾಯಣ, ದಾವಣಗೆರೆಯ ಜನತಾ ವಾಣಿ ದಿನಪತ್ರಿಕೆ ಸಂಪಾದಕ ಎಚ್‌.ಎನ್‌.ಷಡಕ್ಷರಪ್ಪ, ಆಕಾಶವಾಣಿಯ ನಿವೃತ್ತ ಸಹಾಯಕ ಸುದ್ದಿ ಸಂಪಾದಕಿ ನಾಗಮಣಿ ಎಸ್‌. ರಾವ್‌ ಅವರು ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ರಾಜ್ಯ ಸರ್ಕಾರದ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಒಂದು ಲಕ್ಷ ರೂ.ನಗರುದ ಹಾಗೂ ಫಲಕವನ್ನು ಪ್ರಶಸ್ತಿ ಒಳಗೊಂಡಿದ್ದು, ಪ್ರಶಸ್ತಿ ವಿತರಣಾ ಸಮಾರಂಭದ ದಿನಾಂಕವನ್ನು ಸದ್ಯದಲ್ಲಯೇ ಪ್ರಕಟಿಸುವುದಾಗಿ ಮುಖ್ಯಮಂತ್ರಿ ಎನ್‌.ಧರ್ಮಸಿಂಗ್‌ ತಿಳಿಸಿದ್ದಾರೆ.
(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X