ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಧರಂ ವಿವರಣೆ ಕೋರಿ ಹೈಕೋರ್ಟ್‌ ನೋಟಿಸ್‌

By Staff
|
Google Oneindia Kannada News

ಧರಂ ವಿವರಣೆ ಕೋರಿ ಹೈಕೋರ್ಟ್‌ ನೋಟಿಸ್‌
ಕೋಲಾರ ನಗರಸಭೆ ಆಯುಕ್ತರ ಲಂಚಾವತಾರ! ಅಮಾನತ್‌ಗೊಳಿಸದೇ ವರ್ಗಾವಣೆ ಮಾಡಿದ್ದು ಸರಿಯೇ?

ಬೆಂಗಳೂರು : ಹಣ ದುರುಪಯೋಗದ ಆರೋಪವನ್ನು ಎದುರಿಸುತ್ತಿರುವ ಕೋಲಾರ ನಗರಸಭೆ ಆಯುಕ್ತರನ್ನು ವರ್ಗಾವಣೆ ಮಾಡಿರುವುದನ್ನು ಪ್ರಶ್ನಿಸಿ, ಮುಖ್ಯಮಂತ್ರಿ ಧರ್ಮಸಿಂಗ್‌ ಮತ್ತು ಕೃಷಿ ಸಚಿವ ಕೆ. ಶ್ರೀನಿವಾಸ ಗೌಡ ಅವರಿಗೆ ರಾಜ್ಯ ಉಚ್ಚ ನ್ಯಾಯಾಲಯ ನೋಟಿಸ್‌ ಜಾರಿ ಮಾಡಿದೆ.

ಲೋಕಾಯುಕ್ತರು ಕೋಲಾರ ನಗರಸಭೆ ಆಯುಕ್ತ ಎಸ್‌. ಹನುಮಂತಪ್ಪರನ್ನು ಹಣ ದುರುಪಯೋಗಕ್ಕೆ ಸಂಬಂಧಿಸಿದಂತೆ ಅಮಾನತು ತನಿಖೆಗೆ ಒಳಪಡಿಸಿದ್ದರು. ಆದರೆ ಧರ್ಮಸಿಂಗ್‌ ಹನುಮಂತಪ್ಪ ಅವರನ್ನು ಅಮಾನತಿನಲ್ಲಿಡದೇ ಮರು ವರ್ಗಾವಣೆ ಮಾಡಿದ್ದರು.

ಹನುಮಂತಪ್ಪ ವರ್ಗಾವಣೆಯನ್ನು ಪ್ರಶ್ನಿಸಿ ಕೋಲಾರದ ಕೆ. ಎಸ್‌. ಸೂರ್ಯನಾರಾಯಣ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿರುವ ನ್ಯಾಯಾಲಯ ವಿವರಣೆ ಕೇಳಲು ಸಂಬಂಧಿಸಿದವರಿಗೆ ನೋಟೀಸ್‌ಜಾರಿಗೊಳಿಸಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X