ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ನಕ್ಸಲರಿಂದ ಯಡಿಯೂರಪ್ಪ ಅವರಿಗೆ ಜೀವ ಬೆದರಿಕೆ
ನಕ್ಸಲರಿಂದ
ಯಡಿಯೂರಪ್ಪ
ಅವರಿಗೆ
ಜೀವ
ಬೆದರಿಕೆ
ಇಂತಹ
ಬೆದರಿಕೆಗಳಿಗೆ
ನಾನು
ಜಗ್ಗುವುದಿಲ್ಲ
-ಬಿ.ಎಸ್.ಯಡಿಯೂರಪ್ಪ
ಈ ವಿಚಾರವನ್ನು ಸದನದಲ್ಲಿ ಪ್ರಸ್ತಾಪಿಸಿದ ಯಡಿಯೂರಪ್ಪ ಅವರು, ಸೂಕ್ತ ರಕ್ಷಣೆ ಒದಗಿಸುವಂತೆ ಸರ್ಕಾರವನ್ನು ಕೋರಿದ್ದಾರೆ. ಅನಾಮಧೇಯ ಪತ್ರದಲ್ಲಿ , ‘ಈಗಲೇ ಬುದ್ಧಿ ಕಲಿತರೆಒಳ್ಳೆಯದು. ಇಲ್ಲವಾದರೆ ನಿಮ್ಮ ಸಾವು ನಮ್ಮ ಕೈಯಲ್ಲಿದೆ’ ಎಂದು ಎಚ್ಚರಿಸಲಾಗಿದೆ.
ನಕ್ಸಲೀಯರನ್ನು ನಿಗ್ರಹಿಸಬೇಕು ಎಂದು ಹೇಳುತ್ತಿರುವುದು ಸರಿಯಿಲ್ಲ. ನೊಂದ ಜೀವಿಗಳಿಗೆ ನ್ಯಾಯ ಒದಗಿಸುವ ಹೋರಾಟ ಮಾಡುವವರು ನಕ್ಸಲೀಯರು. ನಮ್ಮವರನ್ನು ಎನ್ಕೌಂಟರ್ನಲ್ಲಿ ಪೊಲೀಸರಿಂದ ಸಾಯಿಸಿದ್ದೀರಿ. ನಮ್ಮಲ್ಲಿ ಒಬ್ಬನನ್ನು ಸಾಯಿಸಿದರೆ, ನಿಮ್ಮಲ್ಲಿಯ ನೂರು ಜನರನ್ನು ಸಾಯಿಸುತ್ತೇವೆ ಎನ್ನುವ ವಾಕ್ಯಗಳು ಪತ್ರದಲ್ಲಿವೆ.
ಜಗ್ಗುವುದಿಲ್ಲ : ಎಷ್ಟೇ ಬೆದರಿಕೆ ಬಂದರೂ ನಾನು ನಕ್ಸಲೀಯರ ವಿರುದ್ಧದ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
Story first published: Tuesday, March 22, 2005, 23:53 [IST]