ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದೆಲ್ಲೆಡೆ ಬ್ಯಾಂಕ್‌ ನೌಕರರ ಯಶಸ್ವಿ ಪ್ರತಿಭಟನೆ

By Staff
|
Google Oneindia Kannada News

ರಾಜ್ಯದೆಲ್ಲೆಡೆ ಬ್ಯಾಂಕ್‌ ನೌಕರರ ಯಶಸ್ವಿ ಪ್ರತಿಭಟನೆ
ವಿದೇಶಿ ಹೂಡಿಕೆ ವಿರೋಧಿಸಿ ರಾಷ್ಟ್ರಾದ್ಯಂತ ಬ್ಯಾಂಕ್‌ ನೌಕರರ ಮುಷ್ಕರ

ಬೆಂಗಳೂರು : ಬ್ಯಾಂಕ್‌ಗಳನ್ನು ಖಾಸಗೀವಲಯದಲ್ಲಿ ವಿಲೀನಗೊಳಿಸುವುದು ಮತ್ತು ನೇರ ವಿದೇಶಿ ಹೂಡಿಕೆಗೆ ಅನುಮತಿ ನೀಡಿರುವ ಸರ್ಕಾರದ ಪ್ರಕ್ರಿಯೆಯನ್ನು ಖಂಡಿಸಿ, ರಾಜ್ಯದ ಬ್ಯಾಂಕ್‌ ಉದ್ಯೋಗಿಗಳು ಮಂಗಳವಾರ ಪ್ರತಿಭಟನೆ ನಡೆಸಿದರು.

ನೂರಕ್ಕೂ ಅಧಿಕ ಬ್ಯಾಂಕ್‌ ಉದ್ಯೋಗಿಗಳು ನಗರದ ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರು ಮುಖ್ಯಕಚೇರಿಯ ಎದುರು ಪ್ರತಿಭಟಿಸಿದರು. ಮುಷ್ಕರದ ಪರಿಣಾಮ ಬ್ಯಾಂಕ್‌ ಚಟುವಟಿಕೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿದೆ.

ರಾಷ್ಟ್ರದೆಲ್ಲೆಡೆ ಅಖಿಲ ಭಾರತೀಯ ಬ್ಯಾಂಕ್‌ ನೌಕರರ ಒಕ್ಕೂಟ ನೀಡಿದ ಕರೆ ಮೇರೆಗೆ ರಾಜ್ಯದಲ್ಲಿ ನಡೆಸಲಾದ ಮುಷ್ಕರ ಸಂಪೂರ್ಣವಾಗಿ ಯಶಸ್ಸು ಸಾಧಿಸಿದೆ. ಮುಷ್ಕರಕ್ಕೆ ವಿವಿಧ ಜಿಲ್ಲೆ ಹಾಗೂ ತಾಲೂಕುಗಳಿಂದ ನೌಕರರು ಆಗಮಿಸಿದ್ದರು ಎಂದು ಯುನೈಟೆಡ್‌ ಫೋರಂ ಆಫ್‌ ಬ್ಯಾಂಕ್‌ ಯೂನಿಯನ್‌ ತಿಳಿಸಿದೆ.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X